Advertisement

ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ನೀಡಿ

05:16 AM Jan 24, 2019 | Team Udayavani |

ದಾವಣಗೆರೆ: ತ್ರಿವಿಧ ದಾಸೋಹಿ, ನಡೆದಾಡುವ ದೇವರೆಂದೇ ಖ್ಯಾತರಾಗಿದ್ದ ಸಿದ್ಧಗಂಗಾ ಶ್ರೀಕ್ಷೇತ್ರದ ಶ್ರೀ ಶಿವಕುಮಾರ ಸ್ವಾಮೀಜಿಯವರಿಗೆ ಭಾರತ ಸರ್ಕಾರದಿಂದ ಕೊಡಮಾಡುವ ದೇಶದ ಆತ್ಯುನ್ನತ ನಾಗರಿಕ ಪುರಸ್ಕಾರ ಭಾರತ ರತ್ನ ನೀಡಬೇಕೆಂದು ಜೈ ಕರುನಾಡ ವೇದಿಕೆ ಒತ್ತಾಯಿಸಿದೆ.

Advertisement

ಯಾವ ಸರ್ಕಾರವೂ ಮಾಡದ ಮಹತ್ಕಾರ್ಯವನ್ನು ಕಳೆದ ಹಲವು ದಶಕಗಳಿಂದ ಶ್ರೀಶಿವಕುಮಾರ ಸ್ವಾಮೀಜಿಯವರು ನಡೆಸಿದ್ದಾರೆ. ಅಂಥಹ ಮಹಾನ್‌ ಚೇತನಕ್ಕೆ ಭಾರತ ರತ್ನ ನೀಡುವುದರಿಂದ ಆ ಪ್ರಶಸ್ತಿಯ ಮೌಲ್ಯ ಇನ್ನಷ್ಟು ಹೆಚ್ಚಲಿದೆ. ಹಾಗಾಗಿ ಗಣರಾಜ್ಯೋತ್ಸವದಂದು ಶ್ರೀಗಳಿಗೆ ಭಾರತ ರತ್ನ ಪ್ರಕಟಿಸಬೇಕೆಂದು ವೇದಿಕೆ ಟಿ.ಮಂಜುನಾಥ ಗೌಡ, ಎಚ್. ಪರಶುರಾಮ್‌ ನಂದಿಗಾವಿ, ಇತರರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next