Advertisement

ವಿಮಾನ ನಿಲ್ದಾಣ ಶೀಘ್ರ ಆರಂಭಕ್ಕೆ ಒತ್ತಾಯ

06:57 AM Jan 30, 2019 | Team Udayavani |

ಕಲಬುರಗಿ: ಕಲಬುರಗಿ ವಿಮಾನ ನಿಲ್ದಾಣವನ್ನು ಕೂಡಲೇ ಆರಂಭಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕನ್ನಡ ಸೈನ್ಯ ಸಂಘಟನೆ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

Advertisement

ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಿಗಳಿಗೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು, ಅಫಜಲಪುರ ರಸ್ತೆಯಲ್ಲಿನ ರೈಲ್ವೆ ಮೇಲ್ಸೇತುವೆ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಬೇಕು, 371ನೇ(ಜೆ) ಕಲಂ ಅಡಿ ಹೈ.ಕ.ಭಾಗಕ್ಕೆ ಕೇಂದ್ರ ಸರ್ಕಾರ 10 ಸಾವಿರ ಕೋಟಿ ರೂ.ಗಳನ್ನು ಹಾಗೂ ರಾಜ್ಯ ಸರ್ಕಾರ 5 ಸಾವಿರ ರೂ . ಕೋಟಿ ರೂ.ಗಳ ಅನುದಾನವನ್ನು ಬಜೆಟ್‌ನಲ್ಲಿ ಒದಗಿಸುವಂತೆ ಒತ್ತಾಯಿಸಿದರು.

ತ್ರಿವಿಧ ದಾಸೋಹಿ, ನಡೆದಾಡುವ ದೇವರು ಲಿಂ| ಡಾ| ಶಿವಕುಮಾರ ಸ್ವಾಮೀಜಿ ಹೆಸರಲ್ಲಿ ಅಂತಾರಾಷ್ಟ್ರೀಯ ಪ್ರಶಸ್ತಿ ಸ್ಥಾಪಿಸಬೇಕು, ಹೈ.ಕ.ಭಾಗದಲ್ಲಿ ಸಾರ್ವಜನಿಕ ಉದ್ಯಮಗಳನ್ನು, ಕೈಗಾರಿಕೆಗಳನ್ನು ಹಾಗೂ ಬೃಹತ್‌ ಕೈಗಾರಿಕೆಗಳನ್ನು ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.

ಸಂಘಟನೆ ಸಂಸ್ಥಾಪಕ ಸೋಮನಾಥ ಕಟ್ಟಿಮನಿ, ಪಿ.ಕೆ. ಪೂಜಾರಿ, ಡಾ| ರಾಜಶೇಖರ ಕಟ್ಟಿಮನಿ, ಸುರೇಶ ಗೋಳಾ, ಕವಿರಾಜ ಕೋರಿ, ರಾಜಕುಮಾರ ಎಸ್‌.ಕೆ., ಬಸವರಾಜ ಕಟ್ಟಿಮನಿ, ಅಮರ ಅಂಬಲಗಿ, ಅಮೃತ ಹಾಗರಗಿ, ಶಂಕರ ತಾಳಿಕೋಟಿ, ಕಾಶೀನಾಥ ಬಿ.ಕೆ., ಶಂಕರ ಎನ್‌.ಕೆ., ಶ್ರೀಹರಿ ಗೋಳಾ, ಶರಣು ಗೋಳಾ, ರಾಜಕುಮಾರ ಕಟ್ಟಿಮನಿ,ತರುಣ ಹರಳಯ್ಯ, ರಾಹುಲ್‌ ಕೆ., ವಿಜಯಕುಮಾರ ಪಾಟೀಲ, ನಿತೀನ ಕಣ್ಣೂರ, ನಾಗರಾಜ ಕಟ್ಟಿಮನಿ, ಗಿರೀಶ ಪಾಟೀಲ, ಅಮರ ಅಂಬಲಗಿ, ಶ್ರೀಕಾಂತ ಕುಲಕರ್ಣಿ, ಶರಣು ಹಂಗರಗಿ, ಸಂತೋಷ ಹಾಗರಗುಂಡಗಿ, ಸುನೀಲ, ಮಲ್ಲಿಕಾರ್ಜುನ, ಮಂಜುನಾಥ ಪ್ರತಿಭಟನೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next