Advertisement

ನಿವೃತ್ತ ವಿಜ್ಞಾನಿಗೆ ಸುಪ್ರೀಂ ಪರಿಹಾರ

01:22 PM Sep 15, 2018 | Karthik A |

ಹೊಸದಿಲ್ಲಿ: ಇಸ್ರೋ ಗೂಢಚರ್ಯೆ ಪ್ರಕರಣ ಸಂಬಂಧ ನಿವೃತ್ತ ವಿಜ್ಞಾನಿ ಎಸ್‌. ನಂಬಿ ನಾರಾಯಣನ್‌ (76) ಅವರನ್ನು ಕೇರಳ ಪೊಲೀಸರು ಬಂಧಿಸಿದ್ದ ಕ್ರಮ ಸರಿಯಲ್ಲ ಎಂದು ಸುಪ್ರೀಂಕೋರ್ಟ್‌ ಹೇಳಿದೆ. ಜತೆಗೆ ಅವರಿಗೆ 50 ಲಕ್ಷ ರೂ. ಪರಿಹಾರ ನೀಡುವಂತೆಯೂ ಆದೇಶಿಸಿದೆ. ಕೇರಳ ಪೊಲೀಸರ ಕ್ರಮದ ಬಗ್ಗೆ ಪರಿಶೀಲನೆ ನಡೆಸಲು ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಡಿ.ಕೆ.ಜೈನ್‌ ನೇತೃತ್ವದ ಸಮಿತಿ ರಚಿಸಲು ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ನ್ಯಾಯಪೀಠ ಶುಕ್ರವಾರ ಆದೇಶ ನೀಡಿದೆ.

Advertisement

ಇಸ್ರೋದ ರಾಕೆಟ್‌ ವಿಜ್ಞಾನಿಯಾಗಿದ್ದ ನಂಬಿ ನಾರಾಯಣನ್‌ ಇಬ್ಬರು ಮಾಲ್ಡೀವ್ಸ್‌ ಪ್ರಜೆಗಳಿಗೆ ರಾಕೆಟ್‌ ಮತ್ತು ಇತರ ಪ್ರಮುಖ ರಹಸ್ಯ ಮಾಹಿತಿ ನೀಡಿದ್ದಾರೆ ಎಂಬ ಆರೋಪ ಹೊರಿಸಿ, 1994ರಲ್ಲಿ ಬಂಧಿಸಲಾಗಿತ್ತು. 50 ದಿನಗಳ ಕಾಲ ಅವರು ಜೈಲು ಶಿಕ್ಷೆ ಅನುಭವಿಸಿದ್ದರು. ಈ ವೇಳೆ ಅವರಿಗೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಲಾಗಿತ್ತು ಎಂದು ಅವರು ಆರೋಪಿಸಿದ್ದರು.

ಅಂತಿಮವಾಗಿ ಪ್ರಕರಣ ಸಿಬಿಐಗೆ ಹಸ್ತಾಂತರಗೊಂಡು, ನಂಬಿ ನಾರಾಯಣನ್‌ ಪಾತ್ರ ಪ್ರಕರಣದಲ್ಲಿ ಏನೂ ಇಲ್ಲ ಎಂದು ವರದಿ ನೀಡಿತ್ತು. 1996ರಲ್ಲಿ ಅವರ ವಿರುದ್ಧ ಕೇರಳ ಸರಕಾರ ಮರು ತನಿಖೆಗೆ ಆದೇಶ ನೀಡಿದ್ದರೂ, 1998ರಲ್ಲಿ ಸುಪ್ರೀಂಕೋರ್ಟ್‌ ಅದನ್ನು ರದ್ದು ಮಾಡಿತ್ತು.  ತೀರ್ಪಿನ ಬಗ್ಗೆ ಸಂತಸ ವ್ಯಕ್ತಪಡಿಸಿರುವ ನಿವೃತ್ತ ವಿಜ್ಞಾನಿ, ಗೂಢಚರ್ಯೆ ಪ್ರಕರಣದಲ್ಲಿ ಪೊಲೀಸರು ಸುಳ್ಳು ಸಾಕ್ಷ್ಯ ಸೃಷ್ಟಿಸಿದ್ದರು. ಅನಗತ್ಯವಾಗಿ ತಮ್ಮನ್ನು ಬಂಧಿಸಲಾಗಿತ್ತು ಎಂಬ ವಾದಕ್ಕೆ ಈಗ ಜಯ ಸಿಕ್ಕಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next