Advertisement

ಕೂಲಿಕಾರರಿಗೆ ಕಡ್ಡಾಯ ಕೆಲಸ ನೀಡಿ: ಶಾಸಕ ಹಿಟ್ನಾಳ

02:53 PM Jun 21, 2020 | Suhan S |

ಕೊಪ್ಪಳ: ಕೋವಿಡ್ ಮಹಾಮಾರಿಯಿಂದ ಅಭಿವೃದ್ಧಿ ಕುಂಟಿತವಾಗಿದೆ. ಇಂತಹ ಸಂದರ್ಭದಲ್ಲಿ ನರೇಗಾ ಕಾಮಗಾರಿ ಎಲ್ಲೆಡೆ ನಡೆದಿವೆ. ಪಿಡಿಒಗಳು ಜನತೆಗೆ ಕಡ್ಡಾಯವಾಗಿ ಕೆಲಸ ನೀಡಬೇಕು ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು.

Advertisement

ಹಿರೇಸಿಂದೋಗಿ ಜಿಪಂ ವ್ಯಾಪ್ತಿಯ ದದೆಗಲ್‌, ಹಲಗೇರಿ, ಕೋಳೂರು, ಹಿರೇಸಿಂದೋಗಿ, ಕಾಟ್ರಳ್ಳಿ, ಚಿಕ್ಕ-ಸಿಂದೋಗಿ ಹಾಗೂ ಗುನ್ನಾಳ ಗ್ರಾಮಗಳಲ್ಲಿ ವಿವಿಧ ಇಲಾಖೆಯಡಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ವೀಕ್ಷಣೆ ಹಾಗೂ ಜನಸಂಪರ್ಕ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ದೇಶಕ್ಕೆ ಆವರಿಸಿರುವ ಕೋವಿಡ್‌-19 ಮಹಾಮಾರಿಯಿಂದ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿದ್ದು, ಜನಪರ ಯೋಜನೆಗಳಿಗೆ ಬರುವ ಅನುದಾನವನ್ನು ಸರ್ಕಾರ ಕೇವಲ ಕೋವಿಡ್ ವಿರುದ್ಧ ಹೋರಾಟಕ್ಕೆ ಬಳಕೆ ಮಾಡುತ್ತಿದೆ. ಅಧಿಕಾರಿಗಳು ಇಂತಹ ಸಂಕಷ್ಟದ ಸಮಯದಲ್ಲಿ ಜನ ಸಾಮನ್ಯರ ಸಮಸ್ಯೆಗಳಿಗೆ ಶೀಘ್ರವೇ ಸ್ಪಂದಿಸಬೇಕು ಎಂದರು.

ಈ ವೇಳೆ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕಾಟನ್‌ ಪಾಷ, ಎಪಿಎಂಸಿ ಅಧ್ಯಕ್ಷ ನಾಗರಾಜ ಚಳ್ಳೂಳ್ಳಿ, ಮಾಜಿ ಕೆಎಂಎಫ್‌ ಅಧ್ಯಕ್ಷ ವೆಂಕನಗೌಡ್ರ ಹಿರೇಗೌಡ್ರ, ಎಪಿಂಸಿ ಮಾಜಿ ಅಧ್ಯಕ್ಷ ಜಡಿಯಪ್ಪ ಬಂಗಾಳಿ, ಕೃಷ್ಣರೆಡ್ಡಿ ಗಲಬಿ, ನಗರಸಭಾ ಸದಸ್ಯ ಅಕ್ಬರ ಪಾಷ ಪಲ್ಟನ್‌ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next