Advertisement

Gautam Gambhir: ಶೀಘ್ರದಲ್ಲೇ ಆಯ್ಕೆದಾರರೊಂದಿಗೆ ಗೌತಮ್‌ ಗಂಭೀರ್‌ ಸಭೆ?

10:14 PM Jul 13, 2024 | Team Udayavani |

ನವದೆಹಲಿ: ಭಾರತ ಕ್ರಿಕೆಟ್‌ ತಂಡಕ್ಕೆ ಮುಖ್ಯ ಕೋಚ್‌ ಆಗಿ ಆಯ್ಕೆಯಾಗಿರುವ ಗೌತಮ್‌ ಗಂಭೀರ್‌, ಶೀಘ್ರದಲ್ಲೇ ಆಯ್ಕೆದಾರರ ಸಭೆ ನಡೆಸುವ ಸಾಧ್ಯತೆಯಿದೆ ಎಂದು ವರದಿಗಳು ಹೇಳಿವೆ.

Advertisement

ಜು.27ರಿಂದ ಆರಂಭಗೊಳ್ಳಲಿರುವ ಶ್ರೀಲಂಕಾಕ್ಕೆ ಭಾರತದ ಪ್ರವಾಸ ಸರಣಿ, ಮುಖ್ಯ ಕೋಚ್‌ ಆದ ಬಳಿಕ ಗಂಭೀರ್‌ಗೆ ಹೆಗಲ ಮೇಲಿರುವ ಮೊದಲ ಕರ್ತವ್ಯವಾಗಿದ್ದು, ಅದಕ್ಕೂ ಮುನ್ನ ಬಿಸಿಸಿಐ ಆಯ್ಕೆದಾರರ ಸಮಿತಿಯಲ್ಲೂ ಬದಲಾವಣೆಯಾಗುವ ಸಾಧ್ಯತೆಯಿದೆ. ಸದ್ಯ, ಮಾಜಿ ಕ್ರಿಕೆಟರ್‌ ಅಜಿತ್‌ ಅಗರ್ಕರ್‌ ಮುಂದಾಳತ್ವದಲ್ಲಿರುವ ಆಯ್ಕೆ ಸಮಿತಿಯಲ್ಲಿ ಶಿವ ಸುಂದರ್‌ ದಾಸ್‌, ಸುಬ್ರೊತೊ ಬ್ಯಾನರ್ಜೀ, ಸಲೀಲ್‌ ಅಂಕೋಲ ಮತ್ತು ಶ್ರೀಧರನ್‌ ಶರತ್‌ ಇದ್ದಾರೆ.

ಶ್ರೀಲಂಕಾಕ್ಕೆ ಪ್ರವಾಸ ಹೋಗಲಿರುವ ಭಾರತ ಕ್ರಿಕೆಟ್‌ ತಂಡ ಅಲ್ಲಿ 3 ಪಂದ್ಯಗಳ ಟಿ20, 3 ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ. ಈ ಸರಣಿಗೆ ರೋಹಿತ್‌ ಶರ್ಮಾ ಮತ್ತು ವಿರಾಟ್‌ ಕೊಹ್ಲಿ ಅಲಭ್ಯರಾಗಲಿದ್ದು, ಹಾರ್ದಿಕ್‌ ಪಾಂಡ್ಯ ಟಿ20ಗೆ, ಕೆ.ಎಲ್‌.ರಾಹುಲ್‌ ಏಕದಿನಕ್ಕೆ ನಾಯಕತ್ವ ವಹಿಸಿಕೊಳ್ಳಲಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next