Advertisement

Theft Case: ಜೈಲಿಂದ ಹೊರಬಂದ ಕೂಡಲೇ ಮತ್ತೆ ಕಳ್ಳತನಕ್ಕಿಳಿದ ಆರೋಪಿ!

10:03 AM Sep 04, 2024 | Team Udayavani |

ಬೆಂಗಳೂರು: ಹಗಲು ವೇಳೆ ಮನೆ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಮಾರತ್ತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಮೈಸೂರು ರಸ್ತೆಯ ಜನತಾ ಕಾಲೋನಿ ನಿವಾಸಿ ನಾಗರಾಜ್‌ ಅಲಿಯಾಸ್‌ ಮತ್ತಿ ನಾಗ(32) ಬಂಧಿತ. ಆರೋಪಿಯಿಂದ 8 ಲಕ್ಷ ರೂ. ಮೌಲ್ಯದ 118 ಗ್ರಾಂ ಚಿನ್ನಾಭರಣ, 203 ಗ್ರಾಂ ಬೆಳ್ಳಿ ವಸ್ತುಗಳು ಹಾಗೂ 1 ಬೈಕ್‌ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.

ಆರೋಪಿ ಇತ್ತೀಚೆಗೆ ಠಾಣೆ ವ್ಯಾಪ್ತಿಯ ಎನ್‌ಟಿಆರ್‌ಲೇಔಟ್‌ನ ಮನೆಯೊಂದರ ಬೀಗ ಮುರಿದು ಬೀರುವಿನ ಲಾಕರ್‌ ನಲ್ಲಿದ್ದ 78 ಗ್ರಾಂ ಚಿನ್ನಾಭರಣ ಕಳವು ಮಾಡಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ. ಆತ ರೂಢಿಗತ ಆರೋಪಿಯಾಗಿದ್ದು, ಈತನ ವಿರುದ್ಧ ಮಾರತ್ತಹಳ್ಳಿ. ಆನೇಕಲ್‌, ಕೋಣನಕುಂಟೆ, ಸೂರ್ಯ ನಗರ ಸೇರಿ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ 12 ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ಹೇಳಿದರು.

ಇತ್ತೀಚೆಗಷ್ಟೇ ಆರೋಪಿ ಪ್ರಕರಣವೊಂದರಲ್ಲಿ ರಾಮನಗರ ಜೈಲು ಸೇರಿದ್ದ ಇದೀಗ ಬಿಡುಗಡೆಯಾಗಿ ಬಂದು ಕೆಲ ದಿನಗಳಲ್ಲೇ ಮತ್ತೆ ಮನೆ ಕಳ್ಳತನ ಮಾಡಿ ಜೈಲು ಸೇರಿದ್ದಾನೆ. ಮಡಿಕೇರಿ ಮೂಲದ ಆರೋಪಿ ಹಲವು ವರ್ಷಗಳಿಂದ ಕಳ್ಳತನವನ್ನೇ ವೃತ್ತಿಯನ್ನಾಗಿಸಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next