Advertisement

ಗದಗ ಬಸ್ ನಿಲ್ದಾಣಕ್ಕೆ ಶ್ರೀ ಪುಟ್ಟರಾಜ ಗವಾಯಿ ಹೆಸರು: ಡಿಸಿಎಂ ಸವದಿ

09:28 PM Nov 24, 2020 | sudhir |

ಗದಗ: ಗದಗ ಪಟ್ಟಣದ ನವೀಕೃತ ಬಸ್ ನಿಲ್ದಾಣಕ್ಕೆ ಗಾನಯೋಗಿ ಶ್ರೀ ಪಂಡಿತ್ ಪುಟ್ಟರಾಜ ಗವಾಯಿಗಳ ಹೆಸರನ್ನು ಇಡುವುದಕ್ಕೆ ಆದೇಶಿಸಲಾಗಿದೆ, ಇಂತಹ ಮಹಾತ್ಮರ ಹೆಸರನ್ನು ಇಡುವುದಕ್ಕೆ ಅವಕಾಶ ನನಗೆ ಸಿಕ್ಕಿರುವುದು ನನ್ನ ಸುಯೋಗ ಮತ್ತು ಪೂರ್ವಜನ್ಮದ ಪುಣ್ಯ ಎಂದು ಭಾವಿಸುತ್ತೇನೆ, ಅಷ್ಟೇ ಅಲ್ಲ ಇದರಿಂದಾಗಿ ಗವಾಯಿಗಳ ಅಸಂಖ್ಯಾತ ಭಕ್ತರ ಬೇಡಿಕೆಯನ್ನೂ ಈಡೇರಿಸಿ ದಂತಾಗಿದೆ ಎಂದು ಉಪಮುಖ್ಯಮಂತ್ರಿಗಳು ಮತ್ತು ಸಾರಿಗೆ ಸಚಿವರಾದ ಶ್ರೀ ಲಕ್ಷ್ಮಣ ಸವದಿ ಅವರು ತಿಳಿಸಿದ್ದಾರೆ.

Advertisement

ನಮಗೆಲ್ಲಾ ದೊಡ್ಡ ಆದರ್ಶವಾಗಿ ದಾರಿದೀಪವಾಗಿರುವ ಶ್ರೀ ಗವಾಯಿಗಳಿಗೆ ಇದರಿಂದಾಗಿ ನಮ್ಮೆಲ್ಲರ ಭಕ್ತಿ, ಗೌರವ ಸಲ್ಲಿಸಲು ಅವಕಾಶವಾದಂತಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next