Advertisement

Gadag: 40 ಕೆ.ಜಿ. ಶ್ರೀರಾಮ ಮಂದಿರ ಕೇಕ್‌

12:45 AM Jan 20, 2024 | Team Udayavani |

ಗದಗ: ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ನಗರದ ಬೇಕರಿಯಲ್ಲಿ ಕೇಕ್‌ನಲ್ಲಿ ಅಯೋಧ್ಯೆಯ ಶ್ರೀರಾಮ ಮಂದಿರ ರಚಿಸಲಾಗಿದೆ.

Advertisement

ಮುಳಗುಂದ ರಸ್ತೆಯ ಸಾಸನೂರ ಬೇಕರಿ’ ಮಾಲಕರು ಮತ್ತು ಸಿಬಂದಿ ಕಳೆದ ಎಂಟು ದಿನಗಳಿಂದ 40 ಕೆ.ಜಿ. ಕೇಕ್‌ನಲ್ಲಿ ಅತ್ಯಂತ ಸುಂದರವಾಗಿ ಶ್ರೀರಾಮಮಂದಿರವನ್ನು ರಚಿಸಿದ್ದಾರೆ. ಶುದ್ಧ ಸಸ್ಯಹಾರಿಯಾದ ಇದನ್ನು ಒಂದು ತಿಂಗಳವರೆಗೆ ಸಂಗ್ರಹಿಸಿಟ್ಟರೂ ಕೆಡದಂತೆ ನಿಗಾ ವಹಿಸಲಾಗಿದೆ.

ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಉದ್ಘಾಟನೆ ದಿನವಾದ ಜ.22ರಂದು ಈ ಬೃಹತ್‌ ಕೇಕ್‌ನ್ನು ಬೇಕರಿಯ ಮುಂಭಾಗ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗುವುದು ಎಂದು ಮಾಲಕ ಶರಣಪ್ಪ ಸಾಸನೂರ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next