Advertisement

ಇಂದಿನಿಂದ ಬಿಗಿ ನಿಯಮ: ಹಳೆಯಂಗಡಿಯಲ್ಲಿ ಬೆಳಿಗ್ಗಿನಿಂದಲೇ ಜನಜಂಗುಳಿ

09:19 AM May 07, 2021 | Team Udayavani |

ಹಳೆಯಂಗಡಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದಿನಿಂದ ಲಾಕ್ ಡೌನ್ ಮಾದರಿಯ ಕರ್ಫ್ಯೂ ನಿಯಮವನ್ನು ಬದಲಾಯಿಸಿದ್ದರಿಂದ ಇಂದು ಬೆಳಿಗ್ಗೆ ಹಳೆಯಂಗಡಿ ಹಾಗೂ ಪಡುಪಣಂಬೂರು ಮುಖ್ಯಪೇಟೆಯಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಜಂಗುಳಿ ನಿರ್ಮಾಣವಾಗಿದೆ.

Advertisement

ತೆರೆದಿರುವ ಪ್ರತಿ ಅಂಗಡಿಗಳ ಮುಂಗಟ್ಟುಗಳಲ್ಲಿ ಹತ್ತಾರು ಗ್ರಾಹಕರು ಸೇರಿ ವ್ಯವಹಾರ ನಡೆಸುತ್ತಿರುವ ದೃಶ್ಯಗಳು ಕಂಡುಬರುತ್ತಿದೆ.

ಜನರು ಸಾಮಾಜಿಕ ಅಂತರವನ್ನು ಮರೆತು ವ್ಯವಹಾರ ನಡೆಸುತ್ತಿರುವುದು ಕಂಡು ಬಂತು.

ಮುಂದಿನ ಎರಡು ದಿನದಲ್ಲಿ ಸಂಪೂರ್ಣ ಲಾಕ್ ಡೌನ್ ಆಗಲಿದೆ ಎನ್ನುವ ಆತಂಕವೂ ಜನರಲ್ಲಿ ಹೆಚ್ಚಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next