Advertisement

ತುಂಬಿದ ತುಂಗಭದ್ರಾ: ಮುಳುಗಿದ ವಿಶ್ವವಿಶ್ಯಾತ ಹಂಪಿ

07:03 PM Jul 25, 2021 | Team Udayavani |

ಹೊಸಪೇಟೆ : ಇಲ್ಲಿನ‌ ತುಂಗಭದ್ರಾ ಜಲಾಶಯದಿಂದ ಭಾನುವಾರ ಹೆಚ್ಚುವರಿ ನೀರನ್ನು‌ ನದಿಗೆ ಹರಿಸಿದ‌ ಪರಿಣಾಮ ವಿಶ್ವವಿಖ್ಯಾತ ಹಂಪಿಯ ತುಂಗಭದ್ರಾ ನದಿ ಅಪಾಯಮಟ್ಟ ಮೀರಿ ಹರಿಯತ್ತಿದೆ.

Advertisement

ಜಲಾಶಯದಿಂದ ಬೆಳಗ್ಗೆ ‌ಹೆಚ್ಚುವರಿ‌ ನೀರನ್ನು‌ ನದಿಗೆ ಹರಿಬಿಡುತ್ತಿದಂತೇ, ಇತ್ತ ಹಂಪಿ ತುಂಗಭದ್ರಾ ‌ನದಿ‌ ತುಂಬಿ‌ ಹರಿಯುತ್ತಿದೆ.

ನದಿ ತಟದಲ್ಲಿರುವ ವೈದಿಕ ಮಂಟಪ, ಸ್ನಾನಘಟ್ಟ, ಕೋಟಿಲಿಂಗ, ಪುರಂದರದಾಸರ ‌ಮಂಟಪ‌‌ ಮುಳಗಡೆಯಾಗಿವೆ. ಚಕ್ರತೀರ್ಥ ಕೋದಂಡರಾಮ ಸ್ವಾಮಿ ದೇಗುಲದ ಹತ್ತಿರಕ್ಕೆ ನೀರು ಬಂದಿದೆ. ಪ್ರವಾಸಿಗರು ನದಿ‌ ನೀರಿಗೆ ಇಳಿಯದಂತೆ ಎಚ್ಚರಿಕೆ‌ ನೀಡಲಾಗಿದೆ. ಬೋಟ್ ಸಂಚಾರವನ್ನು ‌ನಿಷೇಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next