Advertisement

Fruad: ಸರಕಾರಿ ಕೆಲಸದ ಆಸೆ ತೋರಿಸಿ 28 ಲಕ್ಷ ರೂಪಾಯಿ ವಂಚನೆ

01:54 AM Sep 30, 2024 | Team Udayavani |

ಬೆಂಗಳೂರು: ಸರಕಾರಿ ಉದ್ಯೋಗ ಕೊಡಿಸುವುದಾಗಿ ಖಾಸಗಿ ಕಂಪೆನಿ ಉದ್ಯೋಗಿಯೊಬ್ಬರಿಗೆ ಬರೋಬರಿ 28 ಲಕ್ಷ ರೂ. ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

Advertisement

ಈ ಸಂಬಂಧ ಹೊಸಪಾಳ್ಯ ನಿವಾಸಿ ಎಚ್‌.ಕೆ. ರಾಘವೇಂದ್ರ ಅವರು ನೀಡಿದ ದೂರಿನ ಮೇರೆಗೆ ದಾವಣಗೆರೆ ಮೂಲದ ರಾಘವೇಂದ್ರ, ಮಂಜುನಾಥ್‌, ಸುನೀತಾ ಬಾಯಿ, ಗಾಯತ್ರಿ, ಸಚಿನ್‌ ಹಾಗೂ ತಿಲಕ್‌ ಎಂಬವರ ವಿರುದ್ಧ ಬಂಡೇಪಾಳ್ಯ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ದೂರುದಾರ ರಾಘವೇಂದ್ರ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದು, ಈ ಮಧ್ಯೆ ಸ್ನೇಹಿತ ಕಿರಣ್‌ ಮೂಲಕ ದಾವಣಗೆರೆಯ ರಾಘವೇಂದ್ರ ಎಂಬಾತ ಪರಿಚಯವಾಗಿದ್ದಾನೆ. ಆಗ ಆರೋಪಿ ತನಗೆ ಸರಕಾರದ ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳ ಪರಿಚಯವಿದ್ದು, ನಿಮಗೆ ಸರಕಾರಿ ಕೆಲಸ ಕೊಡಿ
ಸುತ್ತೇನೆ. ಅಲ್ಲದೆ, ತನ್ನ ಸಹೋದರ ಮಂಜುನಾಥ್‌ ದಾವಣಗೆರೆಯಲ್ಲಿ ಎಇಇ ಆಗಿ ಕೆಲಸ ಮಾಡುತ್ತಿದ್ದಾನೆ ಎಂದು ನಂಬಿಸಿದ್ದಾನೆ.

ಕೆಲವು ದಿನಗಳ ಬಳಿಕ ಸರಕಾರಿ ಕೆಲಸ ಕೊಡಿಸಲು ಮುಂಗಡವಾಗಿ 2021ರ ಫೆ. 22ರಂದು 2 ಲಕ್ಷ ರೂ.ಅನ್ನು ತನ್ನ ಬ್ಯಾಂಕ್‌ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿದ್ದಾನೆ. ನಂತರ ಹಂತವಾಗಿ ಅವರ ಸಹೋದರ ಮಂಜುನಾಥ್‌ ಪತ್ನಿ ಗಾಯಿತ್ರಿ, ತನ್ನ ಪತ್ನಿ ಸುನೀತಾ ಬಾಯಿ, ರಾಘವೇಂದ್ರನ ಪರಿಚಯಸ್ಥ ಸಚಿನ್‌ ಮತ್ತು ತಿಲಕ್‌ಗೆ ನಗದು ರೂಪದಲ್ಲಿ ಹಣ ಕೊಡಿಸಿದ್ದಾನೆ.

ಆ ಬಳಿಕವೂ ಆರೋಪಿ ಸೂಚಿಸಿದ ಬ್ಯಾಂಕ್‌ ಖಾತೆಗಳಿಗೆ ಒಟ್ಟು 28.40 ಲಕ್ಷ ರೂ. ನೀಡಲಾಗಿದೆ. ಆದರೆ, ಇದುವರೆಗೂ ಸರ್ಕಾರಿ ಕೆಲಸ ಕೊಡಿಸಿಲ್ಲ. ಈ ಬಗ್ಗೆ ಪ್ರಶ್ನಿಸಿದಾಗ ಆರೋಪಿಗಳು ಪ್ರಾಣ ಬೆದರಿಕೆ ಹಾಕಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next