Advertisement

ಗ್ರಾಮಸ್ಥರಿಗೆ ಉಚಿತ ಮಾಸ್ಕ್ ವಿತರಣೆ

06:24 AM May 19, 2020 | Suhan S |

ಚಡಚಣ: ತಾಲೂಕಿನ ದೇವರ ನಿಂಬರಗಿ ಗ್ರಾಮದ ಬಸವಾದಿ ಶರಣ ಹೂಗಾರ ಮಾದಯ್ಯ ಸಂಘದ ಯುವಕರ ಬಳಗದ ಸ್ವತಃ ಖರ್ಚಿನಲ್ಲಿ ಒಂದು ಸಾವಿರ ಮಾಸ್ಕ್ ಗಳು ಗ್ರಾಮದ ಸಾರ್ವಜನಿಕರಿಗೆ ವಿತರಿಸುವುದರ ಜತೆಗೆ ಕೋವಿಡ್ ಜಾಗೃತಿ ಮೂಡಿಸಿದರು.

Advertisement

ಸಂಘದ ಸದಸ್ಯ ಅಂಬಣ್ಣ ಪೂಜಾರಿ ಮಾತನಾಡಿ, ಕೋವಿಡ್  ಮಹಾಮಾರಿ ವೈರಸ್‌ ಜನರ ಜೀವನದೊಂದಿಗೆ ಚೆಲ್ಲಾಟವಾಡುತ್ತಿದೆ. ಎಲ್ಲರೂ ಜಾಗೃತರಾಗಿ ಸೋಂಕು ಹರಡದಂತೆ ತಡೆಗಟ್ಟಲು ರಕ್ಷಾ ಕವಚವಾಗಿ ಮಾಸ್ಕ್ ಉಪಯೋಗಿಸಬೇಕು. ಜನದಟ್ಟಣೆ ಪ್ರದೇಶದಲ್ಲಿ ಅಲೆದಾಡಿದರು ಸಾಮಾಜಿಕ ಅಂತರ ಕಾಯ್ದಕೊಳ್ಳುವ ಮೂಲಕ ಆರೋಗ್ಯವಂತರಾಗಿ ಬದುಕು ನಡೆಸಬೇಕು ಎಂದರು.

ಸೀತಾರಾಮ ಪೂಜಾರಿ, ರವಿ ನಾವಿ, ವಿಶಾಲ ಬಿರಾದಾರ, ಮಲ್ಲಿಕಾರ್ಜುನ ಸೋರಗಾಂವ, ಭೀಮಾಶಂಕರ ಪೂಜಾರಿ, ಅಂಬಾದಾಸ ಪೂಜಾರಿ, ನವೀನ ಪೂಜಾರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next