Advertisement

ವೆಬ್‌ಸೈಟ್‌ಗೆ ಹಣ ಹೂಡಿದ್ದ ಟೆಕಿಗೆ 27 ಲಕ್ಷ ರೂ. ಟೋಪಿ

02:25 PM Jul 06, 2023 | Team Udayavani |

ಬೆಂಗಳೂರು: ಹೆಚ್ಚಿನ ಲಾಭಾಂಶ ನೀಡುವುದಾಗಿ ವೆಬ್‌ಸೈಟ್‌ ವೊಂದರಲ್ಲಿ ಹೂಡಿಕೆ ಮಾಡಿದ್ದ ಟೆಕಿಗೆ ಸೈಬರ್‌ ಕಳ್ಳರು 27 ಲಕ್ಷ ರೂ. ವಂಚನೆ ಮಾಡಿದ್ದಾರೆ. ಹರಳೂರು ರಸ್ತೆಯ ಅಮಿತ್‌ ಕಪಿಲ್‌ (44) ವಂಚನೆಗೊಳಗಾದ ಸಾಫ್ಟ್ವೇರ್‌ ಎಂಜಿನಿಯರ್‌.

Advertisement

ಅಮಿತ್‌ ಹೆಚ್ಚಿನ ಲಾಭಾಂಶ ಪಡೆಯುವ ಉದ್ದೇಶದಿಂದ ವೆಬ್‌ಸೈಟ್‌ವೊಂದರಲ್ಲಿ ಹಣ ಹೂಡಿಕೆ ಮಾಡಲು ಮುಂದಾಗಿದ್ದರು. ಆ ವೆಬ್‌ ಸೈಟ್‌ನಲ್ಲಿದ್ದ ಮೊಬೈಲ್‌ ನಂಬರ್‌ಗೆ ಕರೆ ಮಾಡಿ ವಿಚಾರಿಸಿದಾಗ ಅಪರಿಚಿತರು ಅಮಿತ್‌ ಅವರ ಆಧಾರ್‌ ಕಾರ್ಡ್‌, ಪ್ಯಾನ್‌ ವಿವರ ಪಡೆದಿದ್ದರು. ಬಳಿಕ ಹೆಚ್ಚಿನ ಲಾಭಾಂಶ ನೀಡುವ ಭರವಸೆ ನೀಡಿದ್ದರು. ಅಪರಿಚಿತರು ಸೂಚಿಸಿದ ಬ್ಯಾಂಕ್‌ ಖಾತೆಗೆ ಹಂತ-ಹಂತವಾಗಿ 27 ಲಕ್ಷ ರೂ. ನೆಟ್‌ ಬ್ಯಾಂಕಿಂಗ್‌ ಮೂಲಕ ಹಣ ವರ್ಗಾವಣೆ ಮಾಡಿದ್ದರು. ಇದಾದ ಬಳಿಕ ಅಪರಿಚಿತರು ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಈ ಬಗ್ಗೆ ವಿಚಾರಿಸಿದಾಗ ಇದು ಸೈಬರ್‌ ಕಳ್ಳರ ಕೈ ಚಳಕ ಎಂಬುದು ಗೊತ್ತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next