Advertisement

ತೊಗಾಡಿಯಾ ಹೊಸ ಹೆಜ್ಜೆ

04:35 AM Jun 06, 2018 | Team Udayavani |

ಅಹಮದಾಬಾದ್‌ : ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ಮಾಜಿ ನಾಯಕ ಪ್ರವೀಣ್‌ ತೊಗಾಡಿಯಾ ಅವರು ಇದೇ 24ರಂದು ದಿಲ್ಲಿಯಲ್ಲಿ ಹೊಸ ಧಾರ್ಮಿಕ ಮತ್ತು ಸಾಮಾಜಿಕ ಸಂಘಟನೆಯನ್ನು ಸ್ಥಾಪಿಸುವುದಾಗಿ ಘೋಷಿಸಿದ್ದಾರೆ. ಅಷ್ಟೇ ಅಲ್ಲ, ರೈತರು ನಡೆಸುತ್ತಿರುವ 10 ದಿನಗಳ ಮುಷ್ಕರಕ್ಕೂ ಅವರು ಬೆಂಬಲ ಸೂಚಿಸಿದ್ದಾರೆ. ನಾವು ದಿಲ್ಲಿಯಿಂದ ಒಂದು ಹೊಸ ಹಿಂದೂ ಚಳವಳಿ ಆರಂಭಿಸುತ್ತೇವೆ. ಸದ್ಯದಲ್ಲೇ ಸಂಘಟನೆಯ ಹೆಸರು ಮತ್ತು ಅಜೆಂಡಾವನ್ನು ಬಹಿರಂಗಪಡಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next