Advertisement

ವಿಶೇಷ ಚೇತನ ವಿದ್ಯಾರ್ಥಿನಿ ಮನೆಗೆ ತೆರಳಿ ಅಭಿನಂದಿಸಿದ ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್

03:33 PM Aug 10, 2021 | Team Udayavani |

ಬೆಂಗಳೂರು: ಮಾಜಿ ಶಿಕ್ಷಣ ಸಚಿವರು ಹಾಗೂ ಬಿಜೆಪಿ ಶಾಸಕರು ಆಗಿರುವ ಸುರೇಶ್ ಕುಮಾರ್ ಎಸ್ ಅವರು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿಶೇಷ ಚೇತನ ವಿದ್ಯಾರ್ಥಿನಿಯೋರ್ವಳನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.

Advertisement

ಯಶಸ್ವಿನಿ ಹೆಸರಿನ ವಿದ್ಯಾರ್ಥಿನಿ ಮೂಳೆಯ ಸಮಸ್ಯೆಯಿಂದ ಬಳಲುತ್ತಿದ್ದಾಳೆ. 10ನೇ ವಯಸ್ಸಿನಿಂದಲೇ ಈ ಖಾಯಿಲೆ ಈಕೆಗೆ ಅಂಟಿಕೊಂಡಿದೆ. ಹೆಚ್ಚು ಹೊತ್ತು ಕೂರಲು ಈಕೆಯ ಆಗುವುದಿಲ್ಲ. ಇಂತಹ ಸಮಸ್ಯೆಯ ನಡುವೆಯೂ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಬರದೇ ತೀರುತ್ತೇನೆ ಎಂಬ ಛಲದಿಂದ ಪರೀಕ್ಷೆಯನ್ನು ಬರೆದು 80 % ಅಂಕಗಳನ್ನು ಪಡೆದು ಉತ್ತೀರ್ಣರಾಗಿದ್ದಾಳೆ.

ಇಂದು ಈ ವಿದ್ಯಾರ್ಥಿನಿಯ ಮನೆಗೆ ತೆರಳಿದ ಮಾಜಿ ಸಚಿವರು ಅಭಿನಂದನೆ ತಿಳಿಸಿದ್ದಾರೆ. ಕೆಲವೊತ್ತು ಆಕೆಯ ಜೊತೆ ಮಾತನಾಡಿ ಕುಶಲೋಪರಿ ವಿಚಾರಿಸಿಕೊಂಡು ಬಂದಿದ್ದಾರೆ. ಈ ವಿಚಾರವನ್ನು ತಮ್ಮ ಫೇಸ್ ಬುಕ್ ನಲ್ಲಿ ಹಂಚಿಕೊಂಡ ಅವರು, “ಇಂದು ಯಶಸ್ಸಿನಿಯ ಪುಟ್ಟ ಮನೆಯಲ್ಲಿ ಸಂಭ್ರಮದ ವಾತಾವರಣ ಇತ್ತು. ಆಕೆಯ ಮೊಗದಲ್ಲಿ ತೃಪ್ತಿಯ ನಗೆ ಕಾಣಿಸಿಕೊಂಡಿತ್ತು. ಆಕೆ ಓದಿದ ಮೀರಾ ಶಾಲೆಯ ಶಿಕ್ಷಕ ವೃಂದವೇ ಅಲ್ಲಿ ನೆರೆದಿತ್ತು. ಜುಲೈ 22 ರಂದು ಪರೀಕ್ಷಾ ನಂತರ ಈ ಬಾಲೆಯ ಛಲದ ಕುರಿತು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದೆ. ನಾವೆಲ್ಲರೂ ಯಶಸ್ವಿನಿಯ ಈ ಸಾಧನೆಗೆ ಶ್ಲಾಘನೆ ಮಾಡಬೇಕಲ್ಲವೆ” ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next