Advertisement

ಕುಟುಂಬ ಯೋಜನೆಗೆ ಇಸ್ಲಾಂನಲ್ಲಿ ವಿರೋಧವಿಲ್ಲ :ಚುನಾವಣಾ ಆಯೋಗದ ಮಾಜಿ ಅಧ್ಯಕ್ಷ ಖುರೇಷಿ ಹೇಳಿಕೆ

08:17 PM Mar 07, 2021 | Team Udayavani |

ನವದೆಹಲಿ: “”ಕುಟುಂಬ ಯೋಜನೆ ಬಗ್ಗೆ ಇಸ್ಲಾಂನಲ್ಲಿ ವಿರೋಧವಿಲ್ಲ. ಅಲ್ಲದೆ, ಭಾರತದಲ್ಲಿರುವ ಇತರ ಧರ್ಮೀಯರಿಗೆ ಹೋಲಿಸಿದರೆ ಮುಸ್ಲಿಮರಲ್ಲಿ ಬಹುಪತ್ನಿತ್ವ ಅತಿ ಕಡಿಮೆಯಿದೆ” ಎಂದು ಕೇಂದ್ರ ಚುನಾವಣಾ ಆಯೋಗದ ಮಾಜಿ ಅಧ್ಯಕ್ಷ ಎಸ್‌.ವೈ. ಖುರೇಷಿ ತಿಳಿಸಿದ್ದಾರೆ.

Advertisement

ಸ್ವರಚಿತ ಪುಸ್ತಕವಾದ “ದ ಪಾಪುಲೇಷನ್‌ ಮಿಥ್‌: ಇಸ್ಲಾಂ, ಫ್ಯಾಮಿಲಿ ಪ್ಲಾನಿಂಗ್‌ ಆ್ಯಂಡ್‌ ಪಾಲಿಟಿಕ್ಸ್‌ ಇನ್‌ ಇಂಡಿಯಾ’ ಇತ್ತೀಚೆಗೆ ಮಾರುಕಟ್ಟೆಗೆ ಬಿಡುಗಡೆಯಾಗಿದ್ದು, ಆ ಹಿನ್ನೆಲೆಯಲ್ಲಿ ಅವರು ಮೇಲಿನ ವಿವರಣೆ ನೀಡಿದ್ದಾರೆ.

“”ಸಾಮಾನ್ಯವಾಗಿ ಮುಸ್ಲಿಮರ ಬಗ್ಗೆ ನಮ್ಮ ದೇಶದಲ್ಲಿ ಅನೇಕ ತಪ್ಪು ಕಲ್ಪನೆಗಳಿವೆ. ಅನೇಕ ಪತ್ನಿಯನ್ನು ಹೊಂದಿರುವುದರಿಂದ ಅವರ ಜನಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಿದೆ ಎಂಬುದು ಸತ್ಯಕ್ಕೆ ದೂರವಾದ ಮಾತು. ನಿಜ ಹೇಳಬೇಕೆಂದರೆ, ಅಧಿಕ ಸಂಖ್ಯೆಯಲ್ಲಿರುವ ಹಿಂದೂಗಳನ್ನು ಮೀರಿಸುವಷ್ಟು ಜನಸಂಖ್ಯೆಯನ್ನು ಮುಸ್ಲಿಮರು ಹೊಂದಲು ಸಾಧ್ಯವೇ ಇಲ್ಲ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ :ಸಂಸದ ಅನಂತಕುಮಾರ ಹೆಗಡೆ ಕಾಲಿಗೆ ಶಸ್ತ್ರ ಚಿಕಿತ್ಸೆ

Advertisement

Udayavani is now on Telegram. Click here to join our channel and stay updated with the latest news.

Next