Advertisement

ಮಾಜಿ ಸಂಪುಟ ಕಾರ್ಯದರ್ಶಿ TSR ಸುಬ್ರಮಣಿಯನ್‌ ಇನ್ನಿಲ್ಲ

11:20 AM Feb 26, 2018 | Team Udayavani |

ಹೊಸದಿಲ್ಲಿ : ಮಾಜಿ ಸಂಪುಟ ಕಾರ್ಯದರ್ಶಿ ಟಿಎಸ್‌ಆರ್‌ ಸುಬ್ರಮಣಿಯನ್‌ ಇಂದು ಸೋಮವಾರ ನಿಧನ ಹೊಂದಿದರು. 

Advertisement

ಮಧ್ಯಮ ವರ್ಗದ ತಮಿಳು ಕುಟುಂಬವೊಂದರಲ್ಲಿ ಜನಿಸಿದ್ದ ಸುಬ್ರಮಣಿಯನ್‌  ತಮ್ಮ ಶಾಲಾ ಶಿಕ್ಷಣವನ್ನು ತಂಜಾವೂರ್‌ನಲ್ಲಿ ನಡೆಸಿದ್ದರು.

ಕಲ್ಕತ್ತಾ ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಆ ಬಳಿಕ ಲಂಡನಿನ ಇಂಪೀರಿಯಲ್‌ ಕಾಲೇಜ್‌ ಆಫ್ ಸಯನ್ಸ್‌ ಮತ್ತು ಟೆಕ್ನಾಲಜಿಯಲ್ಲಿ ಅಧ್ಯಯನ ನಡೆಸಿದ್ದರು. ಹಾರ್ವರ್ಡ್‌ ವಿಶ್ವವಿದ್ಯಾಲಯದಿಂದ ಸಾರ್ವಜನಿಕ ಆಡಳಿತೆಯಲ್ಲಿ ಸ್ನಾತಕೋತ್ತರ ಪದವಿಯನ್ನೂ ಅವರು ಪಡೆದಿದ್ದರು. 

ಸುಬ್ರಮಣಿಯನ್‌ ನಿಧನಕ್ಕೆ ಶೋಕ ವ್ಯಕ್ತಪಡಿಸಿ ಟ್ವೀಟ್‌ ಮಾಡಿರುವ ಐಎಎಸ್‌ ಅಸೋಸಿಯೇಶನ್‌, “ಸುಬ್ರಮಣಿಯನ್‌ ನಿಧನದಿಂದಾಗಿ ಇಡಿಯ ಐಎಎಸ್‌ ಸಮುದಾಯಕ್ಕೆ ಮತ್ತು ದೇಶಕ್ಕೆ ಭಾರೀ ದೊಡ್ಡ ನಷ್ಟವಾಗಿದೆ; ಇಡಿಯ ಐಎಎಸ್‌ ಸಮುದಾಯದಲ್ಲಿ ಅವರದ್ದು ಭಾರೀ ದೊಡ್ಡ ವ್ಯಕ್ತಿತ್ವ’ ಎಂದು ಹೇಳಿದೆ.

ರಕ್ಷಣಾ ಸಚಿವ ನಿರ್ಮಲಾ ಸೀತಾರಾಮನ್‌ ಅವರು ಸುಬ್ರಮಣಿಯನ್‌ ಅವರ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next