Advertisement

ಕುಣಿಯೋಕೆ ಬಾರದವರು ನೆಲ ಡೊಂಕು ಅಂದಂತಾಗಿದೆ

07:03 AM Jul 05, 2020 | Lakshmi GovindaRaj |

ದಾವಣಗೆರೆ: ರಾಜ್ಯ ಸರ್ಕಾರ ಕೋವಿಡ್‌ 19 ನಿಯಂತ್ರಣ ಪರಿಕರಗಳ ಖರೀದಿಯಲ್ಲಿ ಲೂಟಿ ಹೊಡೆದಿದೆ ಎನ್ನುವ ಆರೋಪವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಬೀತುಪಡಿಸಲಿ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು  ಸವಾಲು ಹಾಕಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದ ರಾಮಯ್ಯ ಮುಖ್ಯಮಂತ್ರಿಗಳಾಗಿ ಕೆಲಸ ಮಾಡಿದ ಅನುಭವ ಇದ್ದಂಥವರು. ಆರೋಪ ಮಾಡುವು ದಕ್ಕೆ ಮುನ್ನ ಆಧಾರ ಇಟ್ಟುಕೊಂಡು ಮಾತನಾಡಬೇಕು.

Advertisement

ರಾಜ್ಯ ಸರ್ಕಾರ ಕೋವಿಡ್‌ 19 ನಿಯಂತ್ರಣ ಪರಿಕರ ಖರೀದಿಯಲ್ಲಿ ಲೂಟಿ ಹೊಡೆದಿದೆ ಎನ್ನುವುದಕ್ಕೆ ಆಧಾರಗಳಿದ್ದಲ್ಲಿ ಅದನ್ನು ಸಾಬೀತುಪಡಿಸಲಿ. ಮಾಹಿತಿ ಹಕ್ಕು ಕಾಯ್ದೆ  ಯಡಿ ಯಾರೇ ಮಾಹಿತಿ ಕೇಳಿದರೂ ಕೊಡಲಾಗುತ್ತದೆ.  ದಾಖಲೆ ಗಳ ಆಧಾರದಲ್ಲೇ ಆರೋಪ ಸಾಬೀತುಪ‌ಡಿಸಲಿ. ಅವರ ಆರೋಪ ಬರೀ ಪ್ರಚಾರಕ್ಕೆ. ಕುಣಿಯೋಕೆ ಬಾರದವರು ನೆಲ ಡೊಂಕು ಅಂದರು ಎನ್ನುವಂತೆ ಆರೋಪ ಮಾಡಿದ್ದಾರೆ. ಸಿದ್ದರಾಮಯ್ಯ ಅವರಂಥವರು ಸುಳ್ಳು ಆರೋಪ  ಮಾಡು ವುದು ಅವರಿಗೆ ಶೋಭೆ ತರುವಂತದ್ದಲ್ಲ ಎಂದರು.

ಅಡ್ಮಿಟ್‌ ಮಾಡಿಕೊಳ್ಳದಿದ್ದರೆ ಕ್ರಮ: ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್‌-19 ರೋಗಿಗಳ ಚಿಕಿತ್ಸೆಗಾಗಿ ಶೇ.50ರಷ್ಟು ಹಾಸಿಗೆ ಮೀಸಲಿಡಬೇಕು. ಯಾವುದೇ ರೋಗಿಯೇ ಆಗಲಿ ಸರ್ಕಾರಿ  ಆಸ್ಪತ್ರೆಯಿಂದ ರೆಫರ್‌ ಮಾಡಿದರೆ ಮಾತ್ರವೇ ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಿಕೊಳ್ಳಲಾಗುತ್ತದೆ. ರೆಫರ್‌ ಮಾಡದೇ ಇದ್ದಾಗ ತಿರಸ್ಕಾರ ಮಾಡಬಹುದು. ಸರ್ಕಾರಿ ಆಸ್ಪತ್ರೆಗಳಿಂದ ರೆಫರ್‌ ಆಗಿದ್ದರೂ ದಾಖಲು ಮಾಡಿಕೊಳ್ಳದೇ ಇದ್ದಲ್ಲಿ  ಖಂಡಿತವಾಗಿಯೂ ಕ್ರಮ ತೆಗೆದುಕೊಳ್ಳಲಾಗುವುದು ಎಂದು ರಾಮುಲು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next