Advertisement

ಫುಟ್‌ಬಾಲ್ ತಂಡದ ಮಾಜಿ ನಾಯಕ ಶೇಖರ ಬಂಗೇರ ಕೋವಿಡ್ ಗೆ ಬಲಿ

10:03 PM Jun 10, 2021 | Team Udayavani |

ಉಡುಪಿ: ಭಾರತ ಹಾಗೂ ಮಹಾರಾಷ್ತ್ರ ಫುಟ್‌ಬಾಲ್ ತಂಡದ ಮಾಜಿ ನಾಯಕ, ಗೋಲ್‌ಕೀಪರ್ ಹಾಗೂ ಕೋಚ್ ಶೇಖರ ಬಂಗೇರ ಅವರು ಜೂ. 8ರಂದು ಬ್ರಹ್ಮಾವರದ ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ. 74 ವರ್ಷ ಪ್ರಾಯದ ಬಂಗೇರ, ಜೂ.1ರಂದು ಸೋಂಕಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು.

Advertisement

ಉಡುಪಿ ಸಮೀಪದ ಬಡಾನಿಡಿಯೂರು ಮೂಲದ ಶೇಖರ ಬಂಗೇರ ಅವರ ಫುಟ್‌ಬಾಲ್ ಬದುಕೆಲ್ಲಾ ಅರಳಿ, ಬೆಳಗಿದ್ದು ಮುಂಬಯಿಯ ಓರ್ಕೆ ಮಿಲ್ಸ್ ಫುಟ್‌ಬಾಲ್ ತಂಡದಲ್ಲಿ. ಫುಟ್‌ಬಾಲ್‌ನಲ್ಲಿ ಗೋಲ್‌ಕೀಪರ್ ಆಗಿ ಮಿಂಚಿದ ಅವರು 80ರ ದಶಕದ ಪ್ರಾರಂಭದಲ್ಲಿ ಭಾರತ ಎಐಎಫ್‌ಎಫ್ ಫುಟ್‌ಬಾಲ್ ತಂಡದ ನಾಯಕರೂ ಆಗಿದ್ದರು.

ಮುಂಬಯಿಯ ಓರ್ಕೆ ಮಿಲ್ಸ್ ಫುಟಬಾಲ್ ತಂಡದ ಗೋಲ್‌ಕೀಪರ್, ನಾಯಕರಾಗಿದ್ದ ಅವರು ತಂಡ ಪ್ರತಿಷ್ಠಿತ ಫೆಡರೇಷನ್ ಕಪ್ ಫುಟ್‌ಬಾಲ್ ಪ್ರಶಸ್ತಿ ಗೆಲ್ಲಲು ಪ್ರಮುಖ ಕಾರಣರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next