Advertisement

ಕೊರೊನಾ ವಾರಿಯರ್ಸ್‌ಗೆ ಫುಡ್‌ಕಿಟ್‌ ವಿತರಣೆ

08:02 PM Jun 17, 2021 | Team Udayavani |

ಮದ್ದೂರು: ತಾಲೂಕಿನ ಕೊಪ್ಪ ಹೋಬಳಿಯಬೆಕ್ಕಳಲೆ ಹಾಗೂ ಮರಳಿಗ ಗ್ರಾಪಂ ವ್ಯಾಪ್ತಿಗಳಲ್ಲಿ ಕೊರೊನಾ ವಾರಿಯರ್ಸ್‌ಗಳಾಗಿಕರ್ತವ್ಯ ನಿರ್ವಹಿಸುತ್ತಿರುವ ಅಂಗನವಾಡಿಹಾಗೂ ಆಶಾ ಕಾರ್ಯಕರ್ತೆಯರಿಗೆ ಎನ್‌.ಚಲುವರಾಯಸ್ವಾಮಿ ಅಭಿಮಾನಿ ಬಳಗದಿಂದ ಆಹಾರದ ಕಿಟ್‌ ವಿತರಿಸಲಾಯಿತು.

Advertisement

ಮರಳಿಗ ಗ್ರಾಪಂ ಕಚೇರಿ ಆವರಣದಲ್ಲಿಆಯೋಜಿಸಿದ್ದ ಆಹಾರ ಕಿಟ್‌ ವಿತರಣೆಕಾರ್ಯಕ್ರಮಕ್ಕೆ ತಾಪಂ ಉಪಾಧ್ಯಕ್ಷ ಬಿ.ಎಂ.ರಘು ಚಾಲನೆ ನೀಡಿ ಮಾತನಾಡಿ, ಸರ್ಕಾರಕೊರೊನಾ ವಾರಿಯರ್ಸ್‌ಗಳಿಗೆ ಸೂಕ್ತಸೌಲಭ್ಯ ಕಲ್ಪಿಸಿ ವಿಶೇಷ ಪ್ಯಾಕೇಜ್‌ ಘೋಷಣೆಮಾಡುವಂತೆ ಒತ್ತಾಯಿಸಿದರು.

ಗ್ರಾಮದ ಪ್ರತಿ ಮನೆ ಮನೆಗೆ ತೆರಳಿಸೋಂಕಿತರನ್ನು ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆಕೊಡಿಸುವ ಜತೆಗೆ ಗ್ರಾಮದೆಲ್ಲೆಡೆ ಸ್ಥಳೀಯಸಾರ್ವಜನಿಕರಿಗೆ ಅರಿವು ಮೂಡಿಸುವಕಾರ್ಯಕ್ಕೆ ಮುಂದಾಗುತ್ತಿರುವುದು ಉತ್ತಮಬೆಳವಣಿಗೆಯಾಗಿದೆ. ಕೊಪ್ಪ ಹೋಬಳಿವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಕೊರೊನಾ ವಾರಿಯರ್ಸ್‌ಗಳಿಗೆ ಆಹಾರದಕಿಟ್‌ ವಿತರಿಸುತ್ತಿರುವುದಾಗಿ ಹೇಳಿದರು.

ಈ ವೇಳೆ ನಾಗಮಂಗಲ ಗ್ರಾಮಾಂತರಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕೆ.ಎನ್‌.ದಿವಾಕರ್‌,ತಾಲೂಕು ಪಂಚಾಯತಿ ಸದಸ್ಯತೋಯಿಜಾಕ್ಷ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next