Advertisement

Floods: ಸಂಕಷ್ಟದಲ್ಲಿ ಅಸ್ಸಾಂನ 6 ಲಕ್ಷ ಮಂದಿ ನಿರಾಶ್ರಿತ, 43 ಸಾವು

01:02 AM Jun 03, 2024 | Team Udayavani |

ಗುವಾಹಾಟಿ: ರೆಮಲ್‌ ಚಂಡಮಾರುತದ ಪ್ರಭಾವದಿಂದ ಅಸ್ಸಾಂ, ಮಣಿಪುರದಲ್ಲಿ ಆರಂಭವಾದ ಮಳೆ ಎರಡೂ ರಾಜ್ಯಗಳಲ್ಲಿ ಭಾರೀ ಸಮಸ್ಯೆ ಸೃಷ್ಟಿಸಿದೆ. ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಈವರೆಗೆ 10 ಜಿಲ್ಲೆಗಳ 6 ಲಕ್ಷ ಮಂದಿ ನಿರಾಶ್ರಿತ ರಾಗಿದ್ದಾರೆ.

Advertisement

ಮೇ 28 ರಿಂದ ಈ ವರೆಗೆ ಪ್ರವಾಹ ಮತ್ತು ಸಿಡಿಲಿನಿಂದ ಮೃತಪಟ್ಟವರ ಸಂಖ್ಯೆ ಕ್ರಮವಾಗಿ 28 ಮತ್ತು 15ಕ್ಕೆ ತಲುಪಿದೆ. ಕೊಪಿಲಿ, ಬರಾಕ್‌, ಕುಶಿಯಾರಾ ನದಿಗಳು ತುಂಬಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಕಾರಣ ಪ್ರವಾಹ ಪರಿಸ್ಥಿತಿ ಏರ್ಪಟ್ಟಿದೆ. ಹೈಲಕಂಡಿ, ಹೋಜೈ, ಮೊರಿಗಾಂವ್‌, ಕರೀಮ್‌ಗಂಜ್‌ ಸೇರಿದಂತೆ 11 ಜಿಲ್ಲೆಗಳು ಪ್ರವಾಹಕ್ಕೆ ತುತ್ತಾಗಿವೆ. ನಾಗಾಂವ್‌ನಲ್ಲಿ 2.79 ಲಕ್ಷ ಜನ ಹಾನಿಗೊಳಗಾಗಿದ್ದಾರೆ. 40,000ಕ್ಕೂ ಅಧಿಕ ಜನ ನಿರಾಶ್ರಿತ ಶಿಬಿರಗಳಲ್ಲಿದ್ದಾರೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next