Advertisement

ಗಡಿ ಭಾಗದಲ್ಲಿ  ಕಮಲ ಅರಳಿಸಿ

05:34 PM May 10, 2018 | Team Udayavani |

ಚಿಕ್ಕೋಡಿ: ಇಡೀ ರಾಜ್ಯದಲ್ಲಿ ಪರಿವರ್ತನೆಯ ಅಲೆ ಪ್ರಾರಂಭವಾಗಿದೆ. ಕೊನೆಯ ಬಾರಿ ಕಾಂಗ್ರೆಸ್‌ ಕೇವಲ 17 ರಾಜ್ಯಗಳಲ್ಲಿ ತನ್ನ ಆಡಳಿತದ ಅಧಿಪತ್ಯ ಸಾಧಿಸಿತ್ತು. ಆದರೆ ಇಂದು ಬಿಜೆಪಿ ದೇಶದ ಸುಮಾರು 22 ರಾಜ್ಯಗಳೊಟ್ಟಿಗೆ 23 ಸ್ಥಾನವನ್ನು ಕರ್ನಾಟಕದಿಂದ ಪಡೆದುಕೊಳ್ಳಲಿದ್ದು, ರಾಜ್ಯದಲ್ಲಿ ಹಾಗೂ ಕ್ಷೇತ್ರದಲ್ಲಿ ಕಾಂಗ್ರೆಸನ್ನು ಕಿತ್ತೂಗೆದು ಕಮಲವನ್ನು ಅರಳಿಸಲು ತಾವೆಲ್ಲರೂ ಬಿಜೆಪಿಗೆ ಬೆಂಬಲ ನೀಡಬೇಕು ಎಂದು ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.

Advertisement

ಬುಧವಾರ ಯಕ್ಸಂಬಾ ಪಟ್ಟಣದ ಪ್ರತಿ ಮನೆ ಮನೆಗೂ ತೆರಳಿ ಮತಯಾಚಿಸಿ, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೃಹತ್‌ ರ್ಯಾಲಿ ಮೂಲಕ ಚುನಾವಣಾ ಪ್ರಚಾರ ಕೈಗೊಂಡು ಮಾತನಾಡಿದ ಅವರು, ಕ್ಷೇತ್ರದ ಜನ 30 ವರ್ಷಗಳಿಂದ ಅಭಿವೃದ್ಧಿ ಕಾಣದ ಕಾಂಗ್ರೆಸ್‌ ಆಡಳಿತದಿಂದ ಬೇಸತ್ತಿದ್ದು, ಬಿಜೆಪಿಗೆ ಸ್ವ-ಇಚ್ಛೆಯಿಂದ ಸೇರ್ಪಡೆಗೊಂಡು ಪಕ್ಷದ ಬಲ ಹಾಗೂ ನಮ್ಮ ಬಹುಮತಗಳ ಗೆಲುವಿಗೆ ಕಹಳೆ ಊದಲು ಸಜ್ಜಾಗಿದ್ದಾರೆ ಎಂದರು.

ಕಾಂಗ್ರೆಸ್‌ ನಾಯಕರು ಪಕ್ಷದ ಕಾರ್ಯಕರ್ತರನ್ನು ಕೇವಲ ಮತದಾನದ ಸಂದರ್ಭದಲ್ಲಿ ಮಾತ್ರ ಹಿತೈಷಿಗಳಂತೆ ಕಾಣುತ್ತಾರೆ. ಅದೇ ಬಿಜೆಪಿಯ ನಾಯಕರು ಪ್ರತಿ ಕಾರ್ಯಕರ್ತರನ್ನು ನಾಯಕನಂತೆ ನೋಡುತ್ತಾ, ಅವರಿಗೆ ಅ ಧಿಕಾರ ಹಾಗೂ ಜವಾಬ್ದಾರಿ ವಹಿಸಿ ಸಮಾಜಸೇವೆಗೆ ಪ್ರೇರೆಪಿಸುವ ಪಕ್ಷ ಬಿಜೆಪಿಯದಾಗಿದೆ ಎಂದರು. ಯುವ ಧುರೀಣ ಬಸವಪ್ರಸಾದ ಜೊಲ್ಲೆ, ಶಿವರಾಜ ಜೊಲ್ಲೆ, ರಾಜು ಬಾಕಳೆ, ಸುನೀಲ ಅಕ್ಕೋಳೆ, ಸುಧೀರ ಮಾಳಿ, ಉಮೇಶ ಪೋತದಾರ, ದಯಾನಂದ ಮಾಳಿ, ರಜನಿಕಾಂತ ಪಾಂಗಮ, ಅಪ್ಪಾಸಾಬ ಬಾಕಳೆ, ಶಂಕರ ಬಾಕಳೆ, ಪ್ರಶಾಂತ ವಸ್ತ್ರದ, ಮಹೇಶ ಬಾಕಳೆ, ಉದಯ ರಾಯಜಾಧವ, ಮಂದಾರ ರಾಯಜಾಧವ, ಅಮರ ಪರೀಟ ಇತರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next