Advertisement

ದೇಶವಿರೋಧಿ ಚಟುವಟಿಕೆ: ರಾಂಬನ್ ನಲ್ಲಿ ಐವರು ಭೂಗತ ಕೆಲಸಗಾರರ ಬಂಧನ

02:26 PM Oct 20, 2022 | Team Udayavani |

ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ರಾಂಬನ್ ಜಿಲ್ಲೆಯಲ್ಲಿ ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದಕ್ಕಾಗಿ ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿಯಲ್ಲಿ ಐವರು ಆಪಾದಿತ ಭೂಗತ ಕೆಲಸಗಾರರನ್ನು (ಒಜಿಡಬ್ಲ್ಯೂಗಳು)ಗುರುವಾರ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಇದನ್ನೂ ಓದಿ : ಬಾಯಲ್ಲಿ ರಾಮ ಮಂತ್ರ, ಬಗಲಿನಲ್ಲಿ ರಾಹುಲ್: ಉದ್ದವ್ ಕುರಿತು ಬಿಜೆಪಿ ಲೇವಡಿ

ಜಿಲ್ಲೆಯ ಬನಿಹಾಲ್ ತಹಸಿಲ್‌ನಲ್ಲಿ ಪೊಲೀಸರು ಐವರನ್ನು ಅವರ ಚಟುವಟಿಕೆಗಳ ದಾಖಲೆಗಳೊಂದಿಗೆ ಬಂಧಿಸಿದ್ದಾರೆ. ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರು ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿಯಲ್ಲಿ ಅವರನ್ನು ಬಂಧಿಸಲಾಯಿತು ಎಂದು ತಿಳಿಸಿದ್ದಾರೆ.

ಬಂಧಿತ ಐವರು ಭೂಗತ ಕೆಲಸಗಾರರನ್ನು  ಫಾಗು ಡೋಲಿಗಾಂನ ನಜೀರ್ ಅಹ್ಮದ್ ಪಾಲಾ, ಪೊಗಲ್ ಕುಂದದ ಮೊಹಮ್ಮದ್ ಉಸ್ಮಾ ಬಾನ್ಲಿ, ಕ್ರಾವಾದ ಫಿರ್ದಿಯಸ್ ಅಹ್ಮದ್ ಖಾನ್, ತೇಥಾರ್‌ನ ಅಬ್ದುಲ್ ಹಮೀದ್ ಖಾನ್ ಮತ್ತು ಗುಂಡ್ ಅಡಲ್‌ಕೂಟದ ಅನ್ಯತುಲ್ಲಾ ವಾನಿ ಎಂದು ಗುರುತಿಸಲಾಗಿದೆ.

ಬಂಧಿತರು ಭಯೋತ್ಪಾದಕರಿಗೆ ಬೆಂಬಲ, ನಗದು, ಆಶ್ರಯ ಮತ್ತು ಇತರ ಮೂಲಸೌಕರ್ಯಗಳೊಂದಿಗೆ ಸಹಾಯ ಮಾಡುತ್ತಿರುವುದು ಕಂಡು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next