Advertisement

ಟೀಂ ಇಂಡಿಯಾ ಜೈವಿಕ ಸುರಕ್ಷಾ ವಲಯದಿಂದ ಹೊರಬಂದ ಐವರು ಆಟಗಾರರು

09:43 AM Jun 21, 2021 | Team Udayavani |

ಸೌಥಾಂಪ್ಟನ್‌: ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ ಫೈನಲ್‌ನಲ್ಲಿ ಅವಕಾಶ ಪಡೆಯದ ಭಾರತದ ಐವರು ಕ್ರಿಕೆಟಿಗರನ್ನು ಜೈವಿಕ ಸುರಕ್ಷಾ ವಲಯದಿಂದ ಬಿಡುಗಡೆಗೊಳಿಸಲಾಗಿದೆ.

Advertisement

ಸುದೀರ್ಘ‌ ಪ್ರವಾಸದ ಹಿನ್ನೆಲೆಯಲ್ಲಿ ಆಟಗಾರರು ಮಾನಸಿಕವಾಗಿ ಕುಗ್ಗಬಾರದು ಎಂಬುದು ಇದರ ಉದ್ದೇಶ. ಚಾಂಪಿಯನ್ ಶಿಪ್ ಫೈನಲ್  ಗೆ ಅಂತಿಮಗೊಳಿಸಿದ 15 ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆಯದ ಮಾಯಾಂಕ್‌ ಅಗರ್ವಾಲ್‌, ಶಾರ್ದೂಲ್‌ ಠಾಕೂರ್‌, ಕೆ.ಎಲ್‌.ರಾಹುಲ್‌, ವಾಷಿಂಗ್ಟನ್‌ ಸುಂದರ್‌ ಮತ್ತು ಅಕ್ಷರ್‌ ಪಟೇಲ್‌ ಇದೀಗ ಜೈವಿಕ ಸುರಕ್ಷಾ ವಲಯದಿಂದ ಹೊರ ಬಂದಿದ್ದಾರೆ.

ಇದನ್ನೂ ಓದಿ:ಫೈನಲ್ ಟೆಸ್ಟ್: ಕಾನ್ವೇ ಅರ್ಧಶತಕದ ನೆರವಿನಿಂದ ಉತ್ತಮ ಆರಂಭ ಪಡೆದ ಕಿವೀಸ್

ಕಳೆದ ಮೇ 19ರಿಂದ ಭಾರತದ ಆಟಗಾರರು ಬಯೋ ಬಬಲ್ ನಲ್ಲಿದ್ದಾರೆ. ಅಂದು ಮುಂಬೈ ಹೋಟೆಲ್ ನಲ್ಲಿ ಕ್ವಾರಂಟೈನ್ ಗೆ ಒಳಗಾದ ಆಟಗಾರರು ಬಳಿಕ ಇಂಗ್ಲೆಂಡ್ ಗೆ ಆಗಮಿಸಿ ಅಲ್ಲಿ ಕ್ವಾರಂಟೈನ್ ನಲ್ಲಿದ್ದರು. ಚಾಂಪಿಯನ್ ಶಿಪ್ ಫೈನಲ್ ಬಳಿಕ ಇಂಗ್ಲೆಂಡ್ ಸರಣಿಗೆ ಇನ್ನೂ ಒಂದು ತಿಂಗಳ ಕಾಲ ಸಮಯವಿದೆ. ಈ ವೇಳೆ ಆಟಗಾರರು ನಿರಂತರ ಬಬಲ್ ನಲ್ಲಿದ್ದರೆ ಮಾನಸಿಕವಾಗಿ ಕುಗ್ಗುತ್ತಾರೆ ಎಂಬ ಕಾರಣಕ್ಕೆಅವರನ್ನು ಬಿಡುಗಡೆ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next