Advertisement

Falguni river: ಬಳಂಜ ಪೆರಾಜೆ ಫ‌ಲ್ಗುಣಿ ನದಿಯಲ್ಲಿ ಮೀನುಗಳ ಸಾವು

12:19 AM Apr 08, 2023 | Team Udayavani |

ಬೆಳ್ತಂಗಡಿ: ತಾಪಮಾನ ಏರಿಕೆ ನಡುವೆ ಬಿಸಿಲ ಬೇಗೆಯಿಂದ ನದಿಗಳೆಲ್ಲ ನೀರಿಲ್ಲದೆ ಬತ್ತಿ ಹೋಗುತ್ತಿದ್ದು ಕಾಪಿನಡ್ಕ ಫ‌ಲ್ಗುಣಿ ನದಿಯೂ ನೀರಿಲ್ಲದೆ ಸೊರಗಿ ಹೋಗಿರುವ ಮಧ್ಯೆಯೇ ದುಷ್ಕರ್ಮಿಗಳು ನೀರಿಗೆ ವಿಷ ಪದಾರ್ಥ ಹಾಕಿರುವ ಪರಿಣಾಮ ನದಿಯಲ್ಲಿನ ಮೀನುಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.
ಗುಂಡಿಗಳಲ್ಲಿ ಅಲ್ಪ ಸ್ವಲ್ಪ ನೀರು ಇದ್ದು ಸಣ್ಣ ಪುಟ್ಟ ಮೀನುಗಳಿವೆ. ಆದರೆ ಇದನ್ನೇ ದುರುಪಯೋಗಪಡಿಸಿಕೊಂಡ ಕೆಲವು ದುಷ್ಕರ್ಮಿಗಳು ಬಳಂಜ ಗ್ರಾಮದ ಪೆರಾಜೆ ಬಳಿ ಹಾದು ಹೋಗುವ ಫ‌ಲ್ಗುಣಿ ನದಿಗೆ ವಿಷ ಮಿಶ್ರಿತ ಆಹಾರವನ್ನು ಹಾಕಿ ಮೀನನ್ನು ಹಿಡಿಯುತ್ತಿರುವ ಪರಿಣಾಮ ಸಾವಿರಾರು ಮೀನುಗಳು ನದಿ ಬದಿಯಲ್ಲಿ ಸತ್ತು ಬಿದ್ದಿರುವ ಸಾಧ್ಯತೆಯಿದೆ.

Advertisement

ಕೆಲವು ಮೀನಗಳು ಅರೆ ಪ್ರಜ್ಞಾವಸ್ಥೆಯಲ್ಲಿದ್ದು ಬಿಸಿಯಾದ ನೀರು ಮತ್ತು ಆಮ್ಲಜನಕದ ಕೊರತೆಯಿಂದ ಜೀವ ಉಳಿಸಿಕೊಳ್ಳಲು ಒದ್ದಾಡುತ್ತಿವೆ. ಈ ಕುರಿತು ಸ್ಥಳೀಯರಾದ ಸದಾನಂದ ಸಾಲಿಯಾನ್‌ ಬಳಂಜ ಅವರು ಸೂಕ್ತ ಕ್ರಮ ವಹಿಸುವಂತೆ ಗ್ರಾ.ಪಂ.ಗೆ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next