Advertisement

ಮೀನು ನಿಷೇಧ ತೆರವು ಮಾಡಲ್ಲ: ವಿಶ್ವಜಿತ್‌ ರಾಣೆ

06:15 AM Dec 02, 2018 | |

ಪಣಜಿ: ಹೊರ ರಾಜ್ಯಗಳ ಮೀನುಗಳಿಗೆ ಹೇರಿರುವ ನಿಷೇಧ ತೆರವುಗೊಳಿಸುವಂತೆ ಕರ್ನಾಟಕ ಸಿಎಂ ಕುಮಾರಸ್ವಾಮಿ, ಗೋವಾ ಮುಖ್ಯಮಂತ್ರಿ ಪರೀಕರ್‌ಗೆ ಪತ್ರ ಬರೆದಿದ್ದಾರೆ.

Advertisement

ಆದರೆ, ಎಲ್ಲಿಯವರೆಗೆ ಮೀನು ಸಾಗಾಟಗಾರರು ಹಾಗೂ ವ್ಯಾಪಾರಿಗಳು ಎಫ್‌ಡಿಎ ಸೂಚನೆ ಪಾಲನೆ ಮಾಡುವುದಿಲ್ಲವೋ ಅಲ್ಲಿಯವರೆಗೆ ಹೊರ ರಾಜ್ಯಗಳ ಮೀನುಗಳಿಗೆ ಹೇರಿರುವ ನಿಷೇಧ ತೆರವುಗೊಳಿಸಲಾಗುವುದಿಲ್ಲ ಎಂದು ಗೋವಾ ಆರೋಗ್ಯ ಸಚಿವ ವಿಶ್ವಜಿತ್‌ ರಾಣೆ ತಿಳಿಸಿದ್ದಾರೆ. 

ಸುದ್ದಿಗಾರರ ಜತೆ ಮಾತನಾಡಿದ ಅವರು, ಗೋವಾ ಸರ್ಕಾರವು ಹೊರಡಿಸಿರುವ ಸೂಚನೆ ಹೊರ ರಾಜ್ಯಗಳ ಮೀನುಗಳಿಗೆ ಹೇರಿರುವ ನಿಷೇಧವಲ್ಲ. ಇಲ್ಲಿನ ಜನತೆಯ ಆರೋಗ್ಯದ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಎಲ್ಲಿಯವರೆಗೆ ಆದೇಶದ ಪಾಲನೆ ಆಗುವುದಿಲ್ಲವೋ ಅಲ್ಲಿಯವರೆಗೆ ನಿಷೇಧ ತೆರವುಗೊಳಿಸಲಾಗುವುದಿಲ್ಲ. ಕರ್ನಾಟಕ ಸಿಎಂ ಕುಮಾರಸ್ವಾಮಿ ಬರೆದ ಪತ್ರ ನಮ್ಮ ಕೈ ಸೇರಿದೆ. ಆದರೆ, ಹೊರ ರಾಜ್ಯಗಳ ಮೀನುಗಳಿಗೆ ಹೇರಿರುವ ನಿಷೇಧವನ್ನು ಮಾತ್ರ ತೆರವುಗೊಳಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next