Advertisement

ಮಸ್ಕತ್‌ನಿಂದ ಇಂದು ಮೊದಲ ವಿಮಾನ

10:08 AM May 20, 2020 | mahesh |

ಮಂಗಳೂರು: “ವಂದೇ ಭಾರತ’ ಯೋಜನೆಯಡಿ ದುಬಾೖಯಿಂದ ಮಂಗಳೂರಿಗೆ ಎರಡು ವಿಮಾನ ಆಗಮಿಸಿದ ಬೆನ್ನಲ್ಲೇ ಮೇ 20ರಂದು ಮಸ್ಕತ್‌ನಿಂದ ಬೆಂಗಳೂರು ಮೂಲಕ ಮಂಗಳೂರಿಗೆ ಏರ್‌ ಇಂಡಿಯಾ ವಿಮಾನ ಆಗಮಿಸಲಿದೆ. 63 ಪ್ರಯಾಣಿಕರು ಮಂಗಳೂರಿಗೆ ಬರಲಿದ್ದಾರೆ.

Advertisement

ಮೇ 22ರಂದು ದೋಹಾದಿಂದ ಮತ್ತೂಂದು ವಿಮಾನವು ಬೆಂಗಳೂರಿಗೆ ಬಂದು ಬಳಿಕ ಅಲ್ಲಿಂದ ಮಂಗಳೂರಿಗೆ ಆಗಮಿಸಲಿದೆ. ಮಸ್ಕತ್‌ನಿಂದ ಕನ್ನಡಿಗರನ್ನು ಕರೆತರುವ ಮೊದಲ ವಿಮಾನ ಇದಾಗಿದ್ದು, ಒಟ್ಟು 176 ಪ್ರಯಾಣಿಕರು ಆಗಮಿಸಲಿದ್ದಾರೆ. ಮಧ್ಯಾಹ್ನ 1.30ಕ್ಕೆ ಮಸ್ಕತ್‌ನಿಂದ ಹೊರಟು ಸಂಜೆ 6.15ಕ್ಕೆ ಬೆಂಗಳೂರಿಗೆ ಬರಲಿದೆ. ಅಲ್ಲಿಂದ 7.15ಕ್ಕೆ 8ಕ್ಕೆ ಮಂಗಳೂರಿಗೆ ತಲುಪಲಿದೆ. ದ.ಕ. ಜಿಲ್ಲೆಯವರಿಗೆ ಮಾತ್ರ ಮಂಗಳೂರಿನಲ್ಲಿ, ಉಡುಪಿ ಹಾಗೂ ಇತರ ಜಿಲ್ಲೆಯವರಿಗೆ ಅವರವರ ಜಿಲ್ಲೆಗಳಲ್ಲಿ ಕ್ವಾರಂಟೈನ್‌ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next