Advertisement

ಉಗ್ರರಿದ್ದಲ್ಲೇ ನುಗ್ಗಿ ವಿನಾಶ; ಇದು ನವಭಾರತದ ಹೆಗ್ಗಳಿಕೆ: ಪ್ರಧಾನಿ ಮೋದಿ

11:49 PM Apr 30, 2024 | Team Udayavani |

ಲಾತೂರ್‌: ಕಾಂಗ್ರೆಸ್‌ ಪಕ್ಷವು ಅಧಿಕಾರ ದಲ್ಲಿದ್ದಾಗ ದೇಶದಲ್ಲಿ ನಡೆಯುವ ಉಗ್ರ ಕೃತ್ಯಗಳಿಗೆ ಸಂಬಂಧಿಸಿ ಪಾಕಿಸ್ಥಾನಕ್ಕೆ ಕಾಗದ ಪತ್ರಗಳನ್ನು ರವಾನಿಸಿ ಸುಮ್ಮ ನುಳಿಯುತ್ತಿತ್ತು. ಆದರೆ ಈಗ ಭಾರತ ಬದಲಾಗಿದೆ. ಉಗ್ರರು ಇರುವಲ್ಲಿಗೇ ನುಗ್ಗಿ ಅವರನ್ನು ಹೊಡೆ ದುರುಳಿಸಲಾಗುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು.

Advertisement

ಮಹಾರಾಷ್ಟ್ರದ ಲಾತೂರ್‌ನಲ್ಲಿ ಚುನಾವಣ ಪ್ರಚಾರ ರ್‍ಯಾಲಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಮುಂಬಯಿ ದಾಳಿಯ ಬಳಿಕ ಕಾಂಗ್ರೆಸ್‌ ಆಡಳಿತವು ಪಾಕ್‌ಗೆ ಉಗ್ರ ಚಟುವಟಿಕೆಗಳ ಬಗ್ಗೆ ಮಾಹಿತಿಯುಳ್ಳ ಕಾಗದ ಪತ್ರಗಳನ್ನು ಕಳುಹಿಸಿತ್ತು. ಮಾಧ್ಯಮದ ಕೆಲವರು ಅದನ್ನೇ ದೊಡ್ಡ ಸಾಧನೆ ಎಂಬಂತೆ ಬಿಂಬಿಸಿದ್ದರು. ಆದರೆ ಈಗ ನವಭಾರತ ಕಾಗದಪತ್ರಗಳನ್ನು ಕಳುಹಿಸುವುದಿಲ್ಲ. ಬದಲಿಗೆ ಉಗ್ರ ರನ್ನು ಅವರಿರುವ ನೆಲಕ್ಕೇ ನುಗ್ಗಿ ಕೊಂದು ಹಾಕುತ್ತಿದೆ. “ಮಿಷನ್‌ ಎಲ್‌ಒಸಿ’, “ಸರ್ಜಿಕಲ್‌ ಸ್ಟ್ರೈಕ್‌ ಮೂಲಕ ಪಾಕಿ ಸ್ಥಾನ ವನ್ನು ಶಿಕ್ಷಿಸಿದ ಭಾರತ…’ ಇವು ಹೊಸ ಭಾರತ  ದಲ್ಲಿ ಪ್ರಕಟವಾಗುತ್ತಿರುವ ಸುದ್ದಿ ಶೀರ್ಷಿಕೆಗಳು ಎಂದರು.

ಕಳೆದೆರಡು ಬಾರಿ ನೀವು ನಮಗೆ ಬಹುದೊಡ್ಡ ಗೆಲುವು ನೀಡಿದ್ದೀರಿ. ಅದರಿಂದ ಜನರ ಕಲ್ಯಾಣವನ್ನು ಖಾತ್ರಿ ಪಡಿಸಿದ್ದೇವೆ ಮತ್ತು ಯೋಜನೆಗಳನ್ನು ನೀಡಿದ್ದೇವೆಯೇ ವಿನಾ ಯಾರಿಂದಲೂ ಏನನ್ನೂ ಕಸಿದು ಕೊಳ್ಳುವ ಪ್ರಯತ್ನ ಮಾಡಿಲ್ಲ. ನಮ್ಮ ಸರಕಾರವು ಸಾಮಾಜಿಕ ನ್ಯಾಯಕ್ಕೆ ಬಲವನ್ನು ನೀಡುತ್ತಿದೆ ಎಂದು ಮೋದಿ ಸರಕಾರದ ಸಾಧನೆಗಳನ್ನು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next