Advertisement

ಪಟಾಕಿ ಅವಘಡ : ಬೆಂಗಳೂರಿನಲ್ಲಿ 11 ಮಂದಿ ಆಸ್ಪತ್ರೆಗೆ ದಾಖಲು 

11:28 AM Oct 19, 2017 | Team Udayavani |

ಬೆಂಗಳೂರು: ನಗರದ ವಿವಿಧೆಡೆ ದೀಪಾವಳಿ ಸಂಭ್ರಮದ ವೇಳೆ ಪಟಾಕಿ ಅವಘಡ ಸಂಭವಿಸಿದ್ದು , ಇಬ್ಬರು ಯುವಕರು ಸೇರಿದಂತೆ 11 ಮಂದಿ ಗಾಯಾಳುಗಳಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. 

Advertisement

ನಾರಾಯಣ  ನೇತ್ರಾಲಯದಲ್ಲಿ  8 ಮಂದಿ ದಾಖಲಾಗಿದ್ದು 6 ಮಕ್ಕಳು ಮತ್ತು ಇಬ್ಬರು ಯುವಕರು ಆ ಪೈಕಿ ಸೇರಿದ್ದಾರೆ. 

ಮಿಂಟೋ  ಆಸ್ಪತ್ರೆಗೆ 3 ಜನ ಮಕ್ಕಳು ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಹೆಚ್ಚಿನವರಿಗೆ ಕಣ್ಣೀಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ.

ಆಡುಗೋಡಿ ಯಲ್ಲಿ ಶಾರುಖ್‌ ಎಂಬ ಯುವಕ ಯಾರೋ ಹಚ್ಚಿದ ರಾಕೆಟ್‌ ತಗುಲಿ ಎಡಗಣ್ಣನ್ನೇ ಕಳೆದುಕೊಂಡಿದ್ದಾನೆ. 

Advertisement

Udayavani is now on Telegram. Click here to join our channel and stay updated with the latest news.

Next