Advertisement

ಎನ್‌ಇಕೆಆರ್‌ಟಿಸಿ ಕಾರ್ಯಾಗಾರಕ್ಕೆ ಬೆಂಕಿ: 11 ಬಸ್‌ ಭಸ್ಮ

06:10 AM Mar 01, 2018 | Team Udayavani |

ಕಲಬುರಗಿ: ನಗರದ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿಭಾಗೀಯ ಕಾರ್ಯಾಗಾರದಲ್ಲಿ ಬುಧವಾರ ಮಧ್ಯಾಹ್ನ ಸಂಭವಿಸಿದ ಭಾರಿ ಬೆಂಕಿ ಅವಘಡದಲ್ಲಿ 11 ಬಸ್‌, ಸಾವಿರಾರು ಟೈರ್‌ ಹಾಗೂ ಸಲಕರಣೆಗಳು ಸುಟ್ಟು ಕರಕಲಾಗಿದೆ.

Advertisement

ಇಲ್ಲಿನ ಇಂದಿರಾ ನಗರ-ವಸಂತ ನಗರಕ್ಕೆ ಹೊಂದಿಕೊಂಡಂತೆ ಇರುವ ಈಶಾನ್ಯ ಸಾರಿಗೆ ಸಂಸ್ಥೆ ವಿಭಾಗೀಯ ಕಾರ್ಯಾಗಾರ-2 ಮತ್ತು ಬಸ್‌ ಘಟಕ -3ಕ್ಕೆ ಹೊಂದಿಕೊಂಡಿರುವ ಡಿವಿಷನಲ್‌ ವರ್ಕ್‌ಶಾಪ್‌ನಲ್ಲಿ ಸಣ್ಣದಾಗಿ ಹೊತ್ತಿಕೊಂಡ ಬೆಂಕಿ ಕ್ಷಣಾರ್ಧದಲ್ಲಿ ಎಲ್ಲೆಡೆ ಆವರಿಸಿತು. ಬೆಂಕಿ ನಂದಿಸಲು ಅಗ್ನಿಶಾಮಕ ದಳ ಹರಸಾಹಸ ಪಟ್ಟಿತು. ಪಕ್ಕದಲ್ಲಿಯೇ ಸೆಂಟ್‌ ಜೋಸೆಫ್ ಶಾಲೆ ಇದೆ. ವಿದ್ಯಾನಗರ, ಇಂದಿರಾನಗರ, ರಾಮನಗರ, ವಸಂತ ನಗರಗಳಲ್ಲಿನ ಮನೆಗಳಿಗೂ ಹೊಗೆ ಆವರಿಸಿಕೊಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next