Advertisement

ಡಿಗ್ಗಿ ಸೋತಿದ್ದಕ್ಕೆ ಅಗ್ನಿಪ್ರವೇಶ

07:41 AM Jun 16, 2019 | mahesh |

ಭೋಪಾಲ್: ‘ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಹಿರಿಯ ನಾಯಕ ದಿಗ್ವಿಜಯ್‌ ಸಿಂಗ್‌ ಗೆಲ್ಲದಿದ್ದರೆ, ನಾನು ಜೀವಂತ ಸಮಾಧಿಯಾಗಿ ಬಿಡುತ್ತೇನೆ’ ಎಂದು ಘೋಷಿಸಿದ್ದ ಭೋಪಾಲ್ನ ವೈರಾಗ್ಯಾನಂದ ಸ್ವಾಮೀಜಿ, ರವಿವಾರ (ಜೂ. 16) ದೇಹತ್ಯಾಗಕ್ಕೆ ಮುಂದಾಗಿದ್ದಾರೆ. ಸಾಮಾ ಜಿಕ ಜಾಲ ತಾಣಗಳಲ್ಲಿ ಟ್ರೋಲ್ಗೊಳಗಾದ ಬೆನ್ನಲ್ಲೇ ಅವರು ಈ ನಿರ್ಧಾರ ಕೈಗೊಂಡಿದ್ದಾರೆ.

Advertisement

ಲೋಕಸಭಾ ಚುನಾವಣೆಯಲ್ಲಿ, ಭೋಪಾಲ್ನಿಂದ ಕಾಂಗ್ರೆಸ್‌ ಪರವಾಗಿ ಸ್ಪರ್ಧಿಸಿದ್ದ ದಿಗ್ವಿಜಯ್‌ ಸಿಂಗ್‌, ಬಿಜೆಪಿಯ ಪ್ರಜ್ಞಾ ಸಿಂಗ್‌ ಠಾಕೂರ್‌ ವಿರುದ್ಧ ಸೋತಿದ್ದರು. ಆ ಫ‌ಲಿತಾಂಶ ಬಂದು ತಿಂಗಳು ಕಳೆಯುತ್ತಾ ಬಂದಿದ್ದರೂ, ಸ್ವಾಮೀಜಿಯವರು ಇನ್ನೂ ಸಮಾಧಿಯಾಗಿಲ್ಲವೇಕೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಮಂದಿ ಸ್ವಾಮೀಜಿಯವರನ್ನು ಅಪಹಾಸ್ಯ ಮಾಡಿದ್ದರು. ಹೀಗಾಗಿ, ಜಿಲ್ಲಾಧಿಕಾರಿಗೆ ಪತ್ರ ಬರೆದಿರುವ ಸ್ವಾಮೀಜಿ, ಜೂ.16ರ ಮಧ್ಯಾಹ್ನ 2:11ಕ್ಕೆ ಸರಿಯಾಗಿ ಅಗ್ನಿಪ್ರವೇಶ ಮಾಡುವ ಮೂಲಕ ದೇಹತ್ಯಾಗ ಮಾಡಲಿದ್ದು, ಅದಕ್ಕೆ ಅವಕಾಶ ನೀಡಬೇಕು” ಎಂದು ಕೋರಿದ್ದಾರೆ. ಜಿಲ್ಲಾಧಿಕಾರಿಯವರು ಆ ಪತ್ರವನ್ನು ಮಧ್ಯಪ್ರದೇಶ ರಾಜ್ಯದ ಪೊಲೀಸ್‌ ಮಹಾ ನಿರ್ದೇಶಕರಿಗೆ ರವಾನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next