Advertisement

ಚೆಕ್‌ ಬೌನ್ಸ್‌ಗೆ ಕಡಿವಾಣ ಹಾಕಲು ಹೊಸ ನಿಯಮ?

07:31 PM Oct 09, 2022 | Team Udayavani |

ನವದೆಹಲಿ:ದೇಶದಲ್ಲಿ ಹೆಚ್ಚುತ್ತಿರುವ ಚೆಕ್‌ ಬೌನ್ಸ್‌ ಪ್ರಕರಣಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳಲು ಕೇಂದ್ರ ಹಣಕಾಸು ಸಚಿವಾಲಯ ಚಿಂತನೆ ನಡೆಸಿದೆ.

Advertisement

ಚೆಕ್‌ ಬೌನ್ಸ್‌ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಲೇ ಇದ್ದು, ಇದು ನ್ಯಾಯಾಂಗದ ಮೇಲೆಯೂ ಹೊರೆಯನ್ನು ಹೆಚ್ಚಿಸುತ್ತಿದೆ. ಇಂಥ ಪ್ರಕರಣಗಳ ಸಂಖ್ಯೆ ಇಳಿಸುವ ನಿಟ್ಟಿನಲ್ಲಿ ಇತ್ತೀಚೆಗೆ ವಿತ್ತ ಸಚಿವಾಲಯ ಕರೆದಿದ್ದ ಉನ್ನತ ಮಟ್ಟದ ಸಭೆಯಲ್ಲಿ ಹಲವು ಕ್ರಮಗಳ ಕುರಿತು ಸಲಹೆಗಳು ಕೇಳಿಬಂದಿವೆ.

ಒಬ್ಬ ವ್ಯಕ್ತಿ ನೀಡಿದ ಚೆಕ್‌ ಬೌನ್ಸ್‌ ಆದರೆ ಅಥವಾ ಆತನ ಖಾತೆಯಲ್ಲಿ ಸಾಕಷ್ಟು ಹಣ ಇಲ್ಲದೇ ಇದ್ದರೆ, ಆಗ ಅದೇ ವ್ಯಕ್ತಿಯ ಹೆಸರಲ್ಲಿರುವ ಮತ್ತೊಂದು ಬ್ಯಾಂಕ್‌ ಖಾತೆಯಿಂದ ಹಣವನ್ನು ಡೆಬಿಟ್‌ ಮಾಡುವುದು, ಚೆಕ್‌ ಬೌನ್ಸ್‌ ಅನ್ನು ಸುಸ್ತಿ ಸಾಲ ಎಂದು ಪರಿಗಣಿಸಿ ಆತನ ಸ್ಕೋರ್‌ ಅನ್ನು ಕೆಳಮಟ್ಟಕ್ಕಿಳಿಸುವಂತೆ ಕ್ರೆಡಿಟ್‌ ಇನಾರ್ಮೇಷನ್‌ ಕಂಪನಿಗಳಿಗೆ ವರದಿ ನೀಡುವುದು, ಚೆಕ್‌ ನೀಡಿದ ವ್ಯಕ್ತಿಯು ಹೊಸ ಖಾತೆ ತೆರೆಯುವುದಕ್ಕೆ ನಿರ್ಬಂಧ ಹೇರುವುದು ಮುಂತಾದ ಅನೇಕ ಕ್ರಮಗಳು ಈಗ ಸಚಿವಾಲಯದ ಮುಂದಿವೆ. ಈ ಎಲ್ಲ ಸಲಹೆಗಳ ಕುರಿತು ಸೂಕ್ತ ಕಾನೂನು ಸಲಹೆಗಳನ್ನು ಪಡೆದು ಮುಂದಿನ ನಿರ್ಧಾರ ಕೈಗೊಳ್ಳಲು ಸರ್ಕಾರ ನಿರ್ಧರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next