Advertisement

ಶಾಲಾ ಶಿಕ್ಷಕಿಯ ಶಪಥ: ಅಂತೂ ರಾಂಪುರಕ್ಕೆ ಬಂತು ಸರ್ಕಾರಿ ಬಸ್‌!

04:36 PM Sep 24, 2021 | Team Udayavani |

ದಾವಣಗೆರೆ: “ರಸ್ತೆ ಆಗುವವರೆಗೆ ಮದುವೆ ಆಗುವುದಿಲ್ಲ’ ಎಂದು ಶಪಥ ಮಾಡುವ ಜೊತೆಗೆ ಪ್ರಧಾನಿ ಮತ್ತು ಮುಖ್ಯಮಂತ್ರಿ ಒಳಗೊಂಡಂತೆ ಅನೇಕರ ಗಮನ ಸೆಳೆದಿದ್ದ ಖಾಸಗಿ ಶಾಲಾ ಶಿಕ್ಷಕಿ ಬಿಂದು ಅವರ ಸ್ವಗ್ರಾಮ ದಾವಣಗೆರೆ ತಾಲೂಕಿನ ಎಚ್‌. ರಾಂಪುರ ಗ್ರಾಮಕ್ಕೆ ಸಾರಿಗೆ ಸಂಸ್ಥೆ ಬಸ್‌ ಸಂಚಾರ ಪ್ರಾರಂಭವಾಗಿದೆ.

Advertisement

ಖಾಸಗಿ ಶಾಲಾ ಶಿಕ್ಷಕಿ ಬಿಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆಯುವ ಮೂಲಕ ಗಮನ ಸೆಳೆದಿದ್ದರು. ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸೆ. 16 ರಂದು ರಾಂಪುರ ಗ್ರಾಮಕ್ಕೆ ಭೇಟಿ ನೀಡಿ ರಸ್ತೆ ನಿರ್ಮಾಣದ ಜೊತೆಗೆ ಬಸ್‌ ಸೌಲಭ್ಯ ಪ್ರಾರಂಭಿಸುವ ಬಗ್ಗೆ ಗ್ರಾಮಸ್ಥರಿಗೆ ಭರವಸೆ ನೀಡಿದ್ದರು. ಬಿಂದು ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಬೇಡಿಕೆ ಈಡೇರಿಸುವುದಾಗಿ ತಿಳಿಸಿದ್ದರು.

ಜಿಲ್ಲಾಧಿಕಾರಿ ಗ್ರಾಮಕ್ಕೆ ಭೇಟಿ ನೀಡಿದ ಮರುದಿನವೇ ರಸ್ತೆ ಕಾಮಗಾರಿ ಪ್ರಾರಂಭವಾಗಿದ್ದು, ಮುಕ್ತಾಯ ಹಂತದಲ್ಲಿದೆ. ಕಳೆದ ಎರಡು ದಿನಗಳಿಂದ ಸಂಜೆ 5:30ಕ್ಕೆ ರಾಂಪುರಕ್ಕೆ ಬಸ್‌ ಬಂದು ಹೋಗುತ್ತಿದೆ. ನಮ್ಮ ಊರಿಗೆ ಪ್ರತಿ ದಿನ ಸಾಯಂಕಾಲ ಸಂಜೆ 5:30ಕ್ಕೆ ಗೌರ್ಮೆಂಟ್‌ ಬಸ್‌ ಬಂದು ಹೋಗುತ್ತಿದೆ. ರಸ್ತೆ ಕೆಲಸಾನೂ ನಡೆಯುತ್ತಿದೆ. ಬೆಳಗ್ಗೆ ಹೊತ್ತೂ ಬಸ್‌ ಬಂದು ಹೋದರೆ ಬಹಳ ಅನುಕೂಲ ಆಗುತ್ತದೆ ಎಂದು ಶಾಲಾಭಿವೃದ್ಧಿ ಸಮಿತಿ ಸದಸ್ಯ ರಮೇಶ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next