Advertisement

ಫೈಟ್‌ ಏನು,ಕುಸ್ತಿ ಮಾಡೋದಾ?ಚಾಮುಂಡೇಶ್ವರಿಯಲ್ಲಿ ಸಿಎಂ ಹೇಳಿದ್ದೇನು? 

10:24 AM Mar 31, 2018 | Team Udayavani |

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಣಕ್ಕಿಳಿಯುತ್ತಿರುವ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸುತ್ತಿದ್ದು ಇಂದು ಶನಿವಾರದಿಂದ 3 ದಿನಗಳ ಕಾಲ ಕ್ಷೇತ್ರಾದ್ಯಂತ ಎಡೆ ಬಿಡದೆ ಪ್ರಚಾರ ನಡೆಸಲಿದ್ದಾರೆ.

Advertisement

ಲಕ್ಷ್ಮೀಪುರಂನಲ್ಲಿ  ಸುದ್ದಿಗಾರರ ಪ್ರಶ್ನೆ ಗೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ ಟೈಟ್‌ ಫೈಟ್‌ ಇದೆಯಾ ಎಂಬ ಪ್ರಶ್ನೆಗೆ ಉತ್ತರಿಸಿ ‘ಫೈಟ್‌ ಏನು ಒಬ್ರಿಗೊಬ್ರು ಕುಸ್ತಿ ಆಡೋದಾ ? ಫೈಟ್‌ ಏನೂ ಇಲ್ಲ , ಜನ ತೀರ್ಮಾನ ಮಡುವುದು. ಅವರ ಒಲವು ನಮ್ಮ ಪರ ಇದೆ’ ಎಂದರು.

‘ಮೇ 15 ಕ್ಕೆ ಕಾಂಗ್ರೆಸ್‌ ಸರ್ಕಾರದ ಶ್ರಾದ್ಧ’ ಎಂದಿದ್ದ  ಕೇಂದ್ರ ಸಚಿವ ಅನಂತ್‌ ಕುಮಾರ್‌ ಹೇಳಿಕೆಗೆ ಪ್ರತಿಕ್ರಿಯೆ ನೀಡಿ ‘ಅವನೊಬ್ಬ ಮತಾಂಧ, ಅವನ ಹೇಳಿಕೆಗಳಿಗೆಲ್ಲಾ ಪ್ರತಿಕ್ರಿಯೆ ನೀಡುವುದಿಲ್ಲ, ಎಂದು ಕಿಡಿ ಕಾರಿದರು. 

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್‌ ಹಾಲಿ ಶಾಸಕ, ಮಾಜಿ ಸಚಿವ ಜಿ.ಟಿ.ದೇವೇಗೌಡ ಮತ್ತು ಸಿಎಂ ಸಿದ್ದರಾಮಯ್ಯ ಅವರ ನಡುವಿನ ಸ್ಫರ್ಧೆ ಭಾರಿ ಜಿದ್ದಾ ಜಿದ್ದಿನ ಕಣ ಎಂದು ಪರಿಗಣಿಸಲ್‌ಪಟ್ಟಿದೆ. ಜಿಟಿಡಿ ಅವರು ಕ್ಷೇತ್ರಾದ್ಯಂತ ಬಿರುಸಿನ ಪ್ರಚಾರದಲ್ಲಿ ನಿರತರಾಗಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next