Advertisement

ಬಜಿಲಕೇರಿ: ತಲವಾರಿನಿಂದ ಹಲ್ಲೆ; ನಾಲ್ವರಿಗೆ ಗಾಯ

02:06 AM Jul 15, 2020 | Hari Prasad |

ಮಂಗಳೂರು: ನಗರದ ಬಂದರು ಪೊಲೀಸ್‌ ಠಾಣಾ ವ್ಯಾಪ್ತಿಯ ಬಜಿಲಕೇರಿ ಎಂಬಲ್ಲಿ ತಂಡಗಳ ನಡುವೆ ಸೋಮವಾರ ರಾತ್ರಿ ಸಂಭವಿಸಿದ ಮಾರಾಮಾರಿಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ.

Advertisement

ಹಳೆ ವೈಷಮ್ಯಕ್ಕೆ ಸಂಬಂಧಿಸಿದಂತೆ ಅಬ್ದುಲ್‌ ರಶೀದ್‌ ಮತ್ತು ತಂಡ ಹಾಗೂ ಇತರರ ನಡುವೆ ಈ ಮಾರಾಮಾರಿ ನಡೆದಿದೆ.

ತಲವಾರಿನಿಂದ ಹಲ್ಲೆ ನಡೆಸಲಾಗಿದ್ದು ಅಜಯ್‌ ಪ್ರಸಾದ್‌, ವಿಜಯ್‌ ಪ್ರಸಾದ್‌, ಅಬ್ದುಲ್‌ ರಶೀದ್‌ ಮತ್ತು ಗುರುರಾಜ್‌ ಗಾಯಗೊಂಡಿದ್ದಾರೆ. ಘಟನೆಯಲ್ಲಿ ಕಾರು ಮತ್ತು ದ್ವಿಚಕ್ರ ವಾಹನಗಳಿಗೂ ಹಾನಿಯಾಗಿದೆ.

ಘಟನೆಗೆ ಸಂಬಂಧಿಸಿ ದೂರು ಪ್ರತಿದೂರುಗಳು ದಾಖಲಾಗಿದ್ದು ಮೊಹಮ್ಮದ್‌ ಆಶಿಕ್‌, ಮೊಹಮ್ಮದ್‌ ಹಮೀದ್‌, ಅಬ್ದುಲ್‌ ರಶೀದ್‌, ಜಿಯಾದ್‌ ಅಯೂಬ್‌, ಮೊಹಮ್ಮದ್‌ ಇಮ್ರಾನ್‌, ಸಫ್ವಾನ್‌, ಮೊಹಮ್ಮದ್‌ ನವಾಜ್‌, ನವಾಜ್‌ ಶರೀಫ್‌, ವಿಜಯ್‌ ಪ್ರಸಾದ್‌, ಅಜಯ್‌ ಪ್ರಸಾದ್‌ ಮತ್ತು ಗುರುರಾಜ್‌ ಎಂಬವರನ್ನು ಬಂಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next