Advertisement

Police ಇಲಾಖೆ ವಿರುದ್ಧ ಮತ್ತೆ ಹೋರಾಟ: ಪುನೀತ್‌ ಕೆರೆಹಳ್ಳಿ

08:25 AM Sep 04, 2024 | Team Udayavani |

ಬೆಂಗಳೂರು: ಕಾಟನ್‌ಪೇಟೆ ಠಾಣೆಯಲ್ಲಿ ರಾತ್ರಿಯಿಡೀ ಬಂಧನದಲ್ಲಿರಿಸಿ ಬೆತ್ತಲೆಗೊಳಿಸಿ ಹಲ್ಲೆ ನಡೆಸಿದ ಸಂದರ್ಭದಲ್ಲಿ ಕೋಣೆಯಲ್ಲಿರುವ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿ ರುವ ದೃಶ್ಯಾವಳಿ ಕೊಡಲು ನಿರಾಕರಿಸಿದ ಪೊಲೀಸ್‌ ಇಲಾಖೆ ವಿರುದ್ಧ ಹಿಂದೂ ಮುಖಂಡ ಪುನೀತ್‌ ಕೆರೆಹಳ್ಳಿ ಹೋರಾಟ ಮುಂದು ವರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

Advertisement

ಜುಲೈ 27ರ ರಾತ್ರಿ 7.30ರಿಂದ ಜುಲೈ 27ರ ಬೆಳಗ್ಗೆ 9 ಗಂಟೆವರೆಗೆ ಕಾಟನ್‌ಪೇಟೆ ಠಾಣೆಯಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ನೀಡುವಂತೆ ಪುನೀತ್‌ ಆರ್‌ಟಿಐ ಮೂಲಕ ಅರ್ಜಿ ಸಲ್ಲಿಸಿದ್ದರು. ಆದರೆ, ಠಾಣೆ ಪೊಲೀಸರು, ದೃಶ್ಯಾವಳಿಗಳಿಗೆ ಸಂಬಂಧಿಸಿದಂತೆ ಬ್ಯಾಟರಾಯನಪುರ ಎಸಿಪಿ ನೋಡಲ್‌ ಅಧಿ ಕಾರಿಯಾಗಿದ್ದಾರೆ. ಆದರಿಂದ ಬ್ಯಾಟರಾಯನಪುರ ಸಹಾಯಕ ಪೊಲೀಸ್‌ ಆಯುಕ್ತರ ಕಚೇರಿಗೆ ಅರ್ಜಿ ಸಲ್ಲಿಸಿ ಮಾಹಿತಿ ಪಡೆದುಕೊಳ್ಳುವಂತೆ ಸೂಚಿಸಿದ್ದಾರೆ. ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಪುನೀತ್‌ ಕೆರೆಹಳ್ಳಿ, ಆ.5 ರಂದು ಅರ್ಜಿ ಸಲ್ಲಿಸಲಾಗಿತ್ತು. ಆದರೆ, ಆ.29ರಂದು ದೃಶ್ಯಾವಳಿ ಕೊಡಲು ಸಾಧ್ಯವಿಲ್ಲ. ಬೇರೆಡೆ ಅರ್ಜಿ ಸಲ್ಲಿಸಿ ಎಂದು ಉತ್ತರ ನೀಡಿದ್ದಾರೆ.

ತಡ ಮಾಡಿದ್ದು ಯಾಕೆ?
ವಿಡಿಯೋ ಡಿಲೀಟ್‌ ಮಾಡುವ ಕುತಂತ್ರವಾಗಿದೆ ಅದ ರಿಂದ ಸಿಸಿ ಕ್ಯಾಮೆರಾ ದೃಶ್ಯಾವಳಿ ನೀಡುವವರೆಗೂ ಅಹೋರಾತ್ರಿ ಧರಣಿ ಮಾಡಬೇಕು ಎಂದು ತೀರ್ಮಾನಿಸಿದ್ದೇನೆ ಎಂದು ಪುನೀತ್‌ ಫೇಸ್‌ಬುಕ್‌ ಮೂಲಕ ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next