Advertisement

ಡಾ|ಸಂಧ್ಯಾ ಆರ್‌. ನಂಬಿಯಾರ್‌ ಅವರಿಗೆ ಸಮ್ಮಾನ

10:35 AM Apr 14, 2018 | Team Udayavani |

ಉಡುಪಿ: ಎಂಜಿಎಂ ಕಾಲೇಜಿನ ವಿಶ್ವಸ್ಥ ಮಂಡಳಿ ಸಭೆಯಲ್ಲಿ ಮಾಸಾಂತ್ಯದಲ್ಲಿ ನಿವೃತ್ತಿ ಹೊಂದಲಿರುವ ಕಾಲೇಜಿನ ಪ್ರಾಂಶುಪಾಲೆ ಡಾ| ಸಂಧ್ಯಾ ಆರ್‌. ನಂಬಿಯಾರ್‌ ಅವರನ್ನು ಸಮ್ಮಾನಿಸಲಾಯಿತು.

Advertisement

ಮಾಹೆಯ ಸಹಕುಲಾಧಿಪತಿ, ಅಕಾಡೆಮಿ ಆಫ್ ಜನರಲ್‌ ಎಜುಕೇಶನ್‌ ಅಧ್ಯಕ್ಷ ಡಾ| ಎಚ್‌. ಎಸ್‌. ಬಲ್ಲಾಳ್‌ ಅವರು ಸಂಧ್ಯಾ ನಂಬಿಯಾರ್‌ ಅವರನ್ನು ಸಮ್ಮಾನಿಸಿದರು, ಡಾ| ಸಂಧ್ಯಾ ಅವರು ಅಲ್ಪಾವಧಿಯಲ್ಲೇ ನಿರೀಕ್ಷೆಗೆ ಮೀರಿದ
ಉತ್ತಮ ಆಡಳಿತ ನೀಡಿದ್ದಾರೆ. ಕಾಲೇಜು ಶೈಕ್ಷಣಿಕ ಪ್ರಗತಿಯನ್ನು ಸಾಧಿಸಲು ಶ್ರಮಿಸಿದ್ದಾರೆ ಎಂದು ಶ್ಲಾಘಿಸಿದರು. 
ಅಕಾಡೆಮಿ ಉಪಾಧ್ಯಕ್ಷ ಟಿ. ಸತೀಶ್‌ ಯು. ಪೈ, ಆಡಳಿತಾಧಿಕಾರಿ ಡಾ| ಎಚ್‌. ಶಾಂತಾರಾಮ್‌, ಪ.ಪೂ. ಕಾಲೇಜಿನ ಭೌತಶಾಸ್ತ್ರ ಪ್ರಾಧ್ಯಾಪಕ ನೀಲಕಂಠ ಆರ್‌. ದಂಡೋತಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next