Advertisement

ರೈತರ ಧರಣಿ: ಹಾಲು, ತರಕಾರಿ ತುಟ್ಟಿ

06:00 AM Jun 03, 2018 | Team Udayavani |

ಮುಂಬೈ/ಚಂಡೀಗಡ: ದೇಶಾದ್ಯಂತ ರೈತರು ಶುಕ್ರವಾರ ಆರಂಭಿಸಿದ “ಗಾಂವ್‌ ಬಂದ್‌’ (ಗ್ರಾಮ ಬಂದ್‌) ಶನಿವಾರ 2ನೇ ದಿನಕ್ಕೆ ಕಾಲಿಟ್ಟಿದೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ರೈತರ ಪ್ರತಿಭಟನೆ ಕೊಂಚವಾಗಿ ತಟ್ಟಲು ಶುರುವಾಗಿದೆ. ಹಾಲು, ತರಕಾರಿಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಜತೆಗೆ ಅವುಗಳ ದರವೂ ಏರಿಕೆಯಾಗಿದೆ. ಪಂಜಾಬ್‌ ಮತ್ತು ಹರ್ಯಾಣಗಳಲ್ಲೂ ಬೆಲೆ ಏರಿಕೆಯಾಗಿದೆ. ಸಾಮಾನ್ಯವಾಗಿ ಟೊಮೆಟೋಗೆ ಕೆ.ಜಿ.ಗೆ 10 ರೂ. ಇದ್ದದ್ದು 20 ರೂ.ಗಳಿಂದ 25 ರೂ.ಗೆ ಏರಿಕೆಯಾಗಿದೆ. 

Advertisement

ಚಿಲ್ಲರೆ ಮಾರುಕಟ್ಟೆಯಲ್ಲಿ ಕೂಡ ತರಕಾರಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಪಿರೋಜ್‌ಪುರದಲ್ಲಿ ರೈತರು ತರಕಾರಿ ಮಾರುಕಟ್ಟೆ ಬಂದ್‌ ಮಾಡುವಂತೆ ಒತ್ತಾಯಿಸಿದ್ದರು ಎಂದು ಹೇಳಲಾಗಿದೆ. ಈ ನಡುವೆ ಅಖೀಲ ಭಾರತ ಕಿಸಾನ್‌ ಸಭಾ ಸದ್ಯ ನಡೆಯುತ್ತಿರುವ ರೈತರ ಪ್ರತಿಭಟನೆಯ ಬಗ್ಗೆ ಮಹಾರಾಷ್ಟ್ರ ಸರ್ಕಾರ ಆದ್ಯತೆ ನೀಡಿಲ್ಲ ಎಂದು ದೂರಿದೆ.  

Advertisement

Udayavani is now on Telegram. Click here to join our channel and stay updated with the latest news.

Next