Advertisement

ಮುಂಗಾರು ಬಿತ್ತನೆಗೆ ಮುಂದಾದ ರೈತರು

07:24 AM Jun 13, 2020 | Suhan S |

ದೇವದುರ್ಗ: ಪಟ್ಟಣ ಸೇರಿ ತಾಲೂಕಿನಾದ್ಯಂತ ಕಳೆದ ಎರಡು ದಿನಗಳಿಂದ ಮೋಡ ಕವಿದ ವಾತಾವರಣವಿದೆ. ಆಗಾಗ ಅಲ್ಪ ಪ್ರಮಾಣದ ಮಳೆ ಸುರಿದಿದ್ದು ರೈತರು ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ.

Advertisement

ಈಗಾಗಲೇ ಹೊಲಗಳನ್ನು ಹದ ಮಾಡಿಕೊಂಡಿರುವ ರೈತರು ಬಿತ್ತನೆಯತ್ತ ಮುಖ ಮಾಡಿದ್ದಾರೆ. ಪಟ್ಟಣ ಸೇರಿ ಜಾಲಹಳ್ಳಿ, ಗಬ್ಬೂರು, ಅರಕೇರಾ ಸೇರಿದಂತೆ ನಾಲ್ಕು ಹೋಬಳಿ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರಗಳಿಗೆ ಅಗತ್ಯ ಬಿತ್ತನೆ ಬೀಜ ಪೂರೈಕೆಯಾಗಿದ್ದು, ರೈತರಿಗೆ ಸಬ್ಸಿಡಿ ದರದಲ್ಲಿ ಬಿತ್ತನೆ ಬೀಜ ವಿತರಿಸಲಾಗುತ್ತಿದೆ. ಬಿತ್ತನೆ ಬೀಜ, ರಸಗೊಬ್ಬರ ಖರೀದಿಸಿದ ರೈತರು ಬಿತ್ತನೆಗೆ ಮುಂದಾಗಿದ್ದಾರೆ.

ದೇವದುರ್ಗ ರೈತ ಸಂಪರ್ಕ ಕೇಂದ್ರಕ್ಕೆ ಸಜ್ಜೆ 850 ಕೆಜಿ, ಅರಕೇರಾ 850 ಕೆಜಿ, ಜಾಲಹಳ್ಳಿ 1200 ಕೆಜಿ, ಗಬ್ಬೂರು 200 ಕೆಜಿ, ದೇವದುರ್ಗ ರೈತ ಸಂಪರ್ಕ ಕೇಂದ್ರಕ್ಕೆ ಭತ್ತ 113 ಕ್ವಿಂಟಲ್‌, ಅರಕೇರಾ 113 ಕ್ವಿಂಟಲ್‌, ಜಾಲಹಳ್ಳಿ 113ಕ್ವಿಂಟಲ್‌, 42 ಕ್ವಿಂಟಲ್‌, ಸೂರ್ಯಕಾಂತಿ ದೇವದುರ್ಗ ರೈತ ಸಂಪರ್ಕ ಕೇಂದ್ರಕ್ಕೆ 1.20 ಕ್ವಿಂಟಲ್‌, ಅರಕೇರಾ 0.90 ಕ್ವಿಂಟಲ್‌, ಜಾಲಹಳ್ಳಿ 1.20 ಕ್ವಿಂಟಲ್‌, ಗಬ್ಬೂರು ಇಲ್ಲ. ದೇವದುರ್ಗ ರೈತ ಸಂಪರ್ಕ ಕೇಂದ್ರಕ್ಕೆ ತೊಗರಿ 23 ಕ್ವಿಂಟಲ್‌, ಅರಕೇರಾ 38.50 ಕ್ವಿಂಟಲ್‌, ಜಾಲಹಳ್ಳಿ, 33 ಕ್ವಿಂಟಲ್‌, ಗಬ್ಬೂರು 38 ಕ್ವಿಂಟಲ್‌ ಬಿತ್ತನೆ ಬೀಜ ಪೂರೈಕೆಯಾಗಿವೆ. ನಾಲ್ಕೂ ಹೋಬಳಿ ಕೇಂದ್ರಕ್ಕೆ ತಲಾ 2.10 ಕ್ವಿಂಟಲ್‌ ಹೆಸರು ಪೂರೈಸಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕಿ ಡಾ| ಎಸ್‌. ಪ್ರಿಯಾಂಕ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next