Advertisement

ಹಾವೇರಿ: ಸಾಲಬಾಧೆಯಿಂದ ಮಗನೊಂದಿಗೆ ಸಾವಿಗೆ ಶರಣಾದ ರೈತ !

05:10 PM May 13, 2018 | Team Udayavani |

ಹಾವೇರಿ: ರಾಜ್ಯದಲ್ಲಿ ಚುನಾವಣೆ ಮುಗಿದು ಫ‌ಲಿತಾಂಶಕ್ಕಾಗಿ ಎದುರುನೋಡುತ್ತಿರುವ ವೇಳೆಯಲ್ಲೇ ಸಾಲಬಾಧೆ ತಾಳಲಾರದೆ ರೈತನೊಬ್ಬ ಮಗನೊಂದಿಗೆ ಆತ್ಮಹತ್ಯೆಗೆ ಶರಣಾದ ದಾರಣ ಘಟನೆ ಭಾನುವಾರ ನಡೆದಿದೆ. 

Advertisement

ಹಾವೇರಿ ಶಂಕರಿಪುರದಲ್ಲಿ  ಮಂಜಪ್ಪ ಕಲ್ಲಮ್ಮನವರ (40 ) ಎಂಬ ರೈತ 6 ವರ್ಷದ ಮಗ ನೊಂದಿಗೆ ಹೊಲದಲ್ಲಿದ್ದ ಕೃಷಿ ಹೊಂಡಕ್ಕೆ ಹಾರಿ ಸಾವಿಗೆ ಶರಣಾಗಿದ್ದಾರೆ. 

ಮಂಜಪ್ಪ  25 ಎಕರೆ ಜಮೀನು ಹೊಂದಿದ್ದು  ಖಾಸಗಿ ಹಾಗೂ ಬ್ಯಾಂಕ್‌ಗಳಲ್ಲಿ 20 ಲಕ್ಷ ರೂಪಾಯಿ ಸಾಲ ಹೊಂದಿದ್ದರು ಎಂದು ತಿಳಿದು ಬಂದಿದೆ. 

ಮಂಜಪ್ಪಗೆ ಮೃತ ಪುತ್ರ ಮತ್ತು ಇನ್ನಿಬ್ಬರು ಮಕ್ಕಳಿದ್ದಾರೆ ಎಂದು ತಿಳಿದು ಬಂದಿದೆ. 

ಹಾವೇರಿ ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next