Advertisement

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

10:22 PM Apr 25, 2024 | Team Udayavani |

ಜಗಳೂರು: ಪತಿಯ ಕಿರುಕುಳಕ್ಕೆ ಬೇಸತ್ತು ನೇಣು ಹಾಕಿಕೊಂಡು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಾವಿಗೆ ತಂದೆಯೇ ಕಾರಣ ಎಂದು ಅವರ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಮಗನೇ ಕೊಲೆಗೈದ ಘಟನೆ ತಾಲೂಕಿನ ಲಕ್ಕಂಪುರ ಗ್ರಾಮದಲ್ಲಿ ನಡೆದಿದೆ.

Advertisement

ಲಕ್ಕಂಪುರ ಗ್ರಾಮದ ಅಂಜಿನಪ್ಪ (55) ಮಗನಿಂದ ಹತ್ಯೆಯಾದವರು. ಇವರು ಪ್ರತಿದಿನ ಮದ್ಯ ಸೇವಿಸಿ ಪತ್ನಿ ತಿಪ್ಪವ್ವ (50) ಜತೆ ಗಲಾಟೆ ಮಾಡುತ್ತಿದ್ದರು. ಇದರಿಂದ ಬೇಸತ್ತು ತಿಪ್ಪವ್ವ ಗುರುವಾರ ಬೆಳಗ್ಗೆ  ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ವಿಷಯ ತಿಳಿದ ಪುತ್ರ ರಮೇಶ್‌ ತಂದೆಯನ್ನು ಕೊಂದಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next