Advertisement

ಇಂದಿರಾ ಗಾಂಧಿ ಹಂತಕನ ಪುತ್ರ ಚುನಾವಣೆ ಕಣಕ್ಕೆ!

01:49 AM Apr 12, 2024 | Team Udayavani |

ಹೊಸದಿಲ್ಲಿ: ಮಾಜಿ ಪ್ರಧಾನಿ ಇಂದಿರಾ ಗಾಂಧಿಯ ಹಂತಕ ಬಿಯಾನ್‌ ಸಿಂಗ್‌ನ ಪುತ್ರ ಸರಬ್ಜಿತ್‌ ಸಿಂಗ್‌ ಖಾಲ್ಸಾ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ಆತ ಪಂಜಾಬ್‌ನ ಫ‌ರೀದ್‌ಕೋಟ್‌ ಮೀಸಲು ಕ್ಷೇತ್ರ ದಿಂದ ಕಣಕ್ಕಿಳಿದಿರುವುದು ವರದಿಯಾಗಿದೆ.

Advertisement

2009 ರಿಂದಲೂ ಲೋಕಸಭೆ ಚುನಾವಣೆಯಲ್ಲಿ ವಿವಿಧ ಮೀಸಲು ಕ್ಷೇತ್ರಗಳಿಂದ ಸ್ಪರ್ಧಿಸುತ್ತಿರುವ ಸರಬ್ಜಿತ್‌ ಪ್ರತೀ ಬಾರಿಯೂ ಪರಾಜಿತರಾಗಿದ್ದು, 2019ರಲ್ಲಿ ಬಹುಜನ್‌ ಸಮಾಜ್‌ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದು ಮತ್ತೆ ಸೋಲನುಭವಿಸಿದ್ದರು. ಇದೀಗ ಸ್ವತಂತ್ರ ಅಭ್ಯರ್ಥಿಯಾಗಿ ಫ‌ರೀದ್‌ಕೋಟ್‌ನಿಂದ ಸ್ಪರ್ಧಿಸುತ್ತಿದ್ದಾರೆ.

ಇಂದಿರಾ ಗಾಂಧಿ ಅವರ ಅಂಗರಕ್ಷಕ ರಾಗಿದ್ದ ಸತ್ವಂತ್‌ ಸಿಂಗ್‌ ಮತ್ತು ಬಿಯಾಂತ್‌ ಸಿಂಗ್‌ ಇಂದಿರಾ ಅವರನ್ನೇ ಗುಂಡಿಟ್ಟು ಕೊಂದಿದ್ದರು. ಸರಬ್ಜಿತ್‌ ಬಿಯಾಂತ್‌ನ ಪುತ್ರರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next