Advertisement

ಪಟ್ಟುಬಿಡದ ರೈತರು: 7ನೇ ಸುತ್ತಿನ ಮಾತುಕತೆ ವಿಫಲ; ಮುಂದಿನ ಸಭೆ ಜ.8ಕ್ಕೆ ನಿಗದಿ

07:56 PM Jan 04, 2021 | Team Udayavani |

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆ ತಾರಕಕ್ಕೇರಿದೆ. ಇಂದು (ಜ.4)  ಕೇಂದ್ರ ಸರ್ಕಾರ  ಜೊತೆಗೆ ರೈತ ಸಂಘಟನೆಗಳು ನಡೆಸಿದ 7ನೇ ಸುತ್ತಿನ ಮಾತುಕತೆ ಕೂಡ ವಿಫಲವಾಗಿದೆ.

Advertisement

ಇಂದಿನ  ಸಭೆಯಲ್ಲಿ, ರೈತ ಪ್ರತಿನಿಧಿಗಳು,  ಸರ್ಕಾರ ನೀಡುವ ತಿದ್ದುಪಡಿಯ ಆಯ್ಕೆಯನ್ನು ಒಪ್ಪಿಕೊಳ್ಳಲು ನಿರಾಕರಿಸಿದರು. ಮಾತ್ರವಲ್ಲದೆ ಜನವರಿ 26ರ ಗಣರಾಜ್ಯೋತ್ಸವದಂದು ರ್ಯಾಲಿ ನಡೆಸುವುದಾಗಿ ತಿಳಿಸಿದ್ದಾರೆ. ಏತನ್ಮಧ‍್ಯೆ ಮುಂದಿನ ಮಾತುಕತೆ ಜನವರಿ 8ಕ್ಕೆ ನಿಗದಿಯಾಗಿದೆ.

ಇಂದಿನ ಮಾತುಕತೆಯಲ್ಲಿ ಸರ್ಕಾರದ ಪರವಾಗಿ ಕೆಂದ್ರ ಮಂತ್ರಿಗಳಾದ ನರೇಂದ್ರ ಸಿಂಗ್ ತೋಮರ್, ಪಿಯೂಷ್ ಗೋಯಲ್, ಸೋಮ್ ಪ್ರಕಾಶ್ ಹಾಜರಿದ್ದರು. ಈ ಸಂದರ್ಭದಲ್ಲಿ ಮೂರು ಕೃಷಿ ಕಾಯ್ದೆಗಳನ್ನು ರದ್ದುಪಡಿಸುವುದನ್ನು ಸರ್ಕಾರ ಸಂಪೂರ್ಣವಾಗಿ ತಳ್ಳಿಹಾಕಿತು.

ಇದನ್ನೂ ಓದಿ: ಭಾರತದಲ್ಲಿ ರೂಪಾಂತರಿ ಕೋವಿಡ್ ಭೀತಿ: ಒಟ್ಟು 38 ಜನರಲ್ಲಿ ಸೋಂಕು ಪತ್ತೆ

ಮೂರು ಕಾಯ್ದೆಗಳನ್ನು ಷರತ್ತುಗಳ ಮೂಲಕ ಜಾರಿಗೆ ತರುತ್ತೇವೆ. ಆದರೇ ಅದನ್ನು ಹಿಂಪಡೆಯಲಾಗುವುದಿಲ್ಲ ಎಂದು ಸರ್ಕಾರ ತಿಳಿಸಿದೆ. ಅದಾಗ್ಯೂ ಫ್ರತಿಭಟನೆಯನ್ನು ಹಿಂಪಡೆಯುವಂತೆ ಮಾಡಲು ಸರ್ಕಾರದ ಬಳಿ ಒಂದೇ ದಾರಿಯಿದ್ದು, ಅದು ಕಾನೂನುಗಳನ್ನು ಹಿಂತೆಗೆದುಕೊಳ್ಳುವುದು ಮತ್ತು ಕನಿಷ್ಠ ಬೆಂಬಲ ಬೆಲೆಗಳನ್ನು ಖಾತರಿಪಡಿಸುವ ಕಾನೂನನ್ನು ತರುವುದು ಎಂದು ಕೃಷಿ ಮುಖಂಡ ಜೋಗಿಂದರ್ ಸಿಂಗ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

Advertisement

ಮಾತುಕತೆಯ ಸಂದರ್ಭದಲ್ಲಿ ಕೇಂದ್ರ ಸಚಿವರಾದ ನರೇಂದ್ರ ಸಿಂಗ್ ತೋಮರ್ ಹಾಗೂ ಪಿಯೂಷ್ ಗೋಯಲ್ ಸೇರಿದಂತೆ ಹಲವರು, ಪ್ರತಿಭಟನೆಯ ವೇಳೆ ಮೃತಪಟ್ಟ ರೈತರಿಗಾಗಿ ಸಂತಾಪ ಸೂಚಿಸಿದರು.

ಇದನ್ನೂ ಓದಿ: ತನ್ನ ಊರಿನ ಸಮಸ್ಯೆ ಹೇಳಲು ಬಂದ ಗ್ರಾ.ಪಂ.ಸದಸ್ಯನನ್ನು ವೇದಿಕೆಯಿಂದ ಕೆಳಗಿಳಿಸಿದ ಸಿದ್ದರಾಮಯ್ಯ

Advertisement

Udayavani is now on Telegram. Click here to join our channel and stay updated with the latest news.

Next