Advertisement

Ramoji Rao ವಿದಾಯ ; ಪಾರ್ಥಿವ ಶರೀರಕ್ಕೆ ಹೆಗಲು ಕೊಟ್ಟ ಚಂದ್ರಬಾಬು ನಾಯ್ಡು

01:48 AM Jun 10, 2024 | Team Udayavani |

ಹೈದರಾಬಾದ್‌: ಶನಿವಾರ ನಿಧನ ಹೊಂದಿದ ರಾದ ದೇಶದ ಮಾಧ್ಯಮ ಕ್ಷೇತ್ರದ ದೈತ್ಯ, ರಾಮೋಜಿ ಗ್ರೂಪ್‌ ಮುಖ್ಯಸ್ಥ ಸಿ. ರಾಮೋಜಿ ರಾವ್‌(88) ಅವರ ಅಂತ್ಯಕ್ರಿಯೆ ರವಿವಾರ ಸಕಲ ಸರಕಾರಿ ಗೌರವಗಳೊಂದಿಗೆ ಹೈದರಾ ಬಾದ್‌ನ ರಾಮೋಜಿ ಫಿಲಂ ಸಿಟಿ ಯಲ್ಲಿ ನೆರವೇರಿತು. ಕುಟುಂಬ ಸದಸ್ಯರು, ಸ್ನೇಹಿತರು, ಹಿತೈಷಿಗಳು ಸೇರಿದಂತೆ ಅಪಾರ ಅಭಿಮಾನಿಗಳ ಸಮ್ಮುಖದಲ್ಲಿ ಪುತ್ರ ಕಿರಣ್‌ ಅವರು ರಾಮೋಜಿಯವರ ಚಿತೆಗೆ ಅಗ್ನಿಸ್ಪರ್ಶ ಮಾಡಿದರು.
ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು, ಭಾರತದ ನಿವೃತ್ತ ನ್ಯಾಯಮೂರ್ತಿ ಎನ್‌.ವಿ. ರಮಣ, ಟಿಡಿಪಿ ಮುಖ್ಯಸ್ಥ ಎನ್‌. ಚಂದ್ರಬಾಬು ನಾಯ್ಡು, ತೆಲಂಗಾಣ ಸಚಿವರಾದ ತುಮ್ಮಲ ನಾಗೇಶ್ವರ ರಾವ್‌ ಮತ್ತು ಡಿ. ಸೀತಕ್ಕ, ಸಿನೆಮಾ ರಂಗದ ಪ್ರಮುಖರು ರಾಮೋಜಿಯವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.

Advertisement

ಪಾರ್ಥಿವ ಶರೀರಕ್ಕೆ ಹೆಗಲು ಕೊಟ್ಟ ನಾಯ್ಡು
ರಾಮೋಜಿ ಕುಟುಂಬದೊಂದಿಗೆ ಆಪ್ತ ನಂಟು ಹೊಂದಿರುವ ಆಂಧ್ರ ನಿಯೋಜಿತ ಸಿಎಂ, ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರು ರವಿವಾರ ರಾಮೋಜಿ ಅವರ ಪಾರ್ಥಿವ ಶರೀರಕ್ಕೆ ಹೆಗಲು ಕೊಟ್ಟು ಸಾಗಿದ್ದು ಕಂಡುಬಂತು. ರಾಮೋಜಿ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡ ಅವರು, ಅನಂತರ ಟ್ವೀಟ್‌ ಮಾಡಿ, “ಯುಗಪುರುಷ ರಾಮೋಜಿ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡೆ, ನನ್ನ ಹೃದಯ ಭಾರವಾಗಿದೆ. ಅವರು ನಮ್ಮೊಂದಿಗೆ ಇಲ್ಲದೇ ಇರಬಹುದು. ಆದರೆ ಅವರು ಸದಾ ನಮ್ಮೆಲ್ಲರಿಗೂ ಸ್ಫೂರ್ತಿಯಾಗಿರುತ್ತಾರೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next