Advertisement

ಅಪ್ಪು ಸಮಾಧಿಗೆ ಅಭಿಮಾನಿಗಳ ಪಾದಯಾತ್ರೆ

09:11 PM Jan 21, 2022 | Team Udayavani |

ಹೊಸಪೇಟೆ: ನಗರದ ಶಂಕರ್‌ ಆನಂದ ಸಿಂಗ್‌ ಸರ್ಕಾರಿ ಪದವಿ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಗುರುವಾರ ನಗರದ ತಹಶೀಲ್ದಾರ್‌ ಕಚೇರಿ ಬಳಿಯ ವೃತ್ತದಿಂದ ಬೆಂಗಳೂರಿನ ಅಪ್ಪು ಸಮಾಧಿವರೆಗೆ ಪಾದಯಾತ್ರೆ ತೆರಳಿದರು.

Advertisement

ವಿದ್ಯಾರ್ಥಿಗಳಾದ ಗಂಗಾಧರ ಮತ್ತು ಹಿರ್ಯಾನಾಯ್ಕ ಪುನೀತ್‌ ರಾಜಕುಮಾರ್‌ ಅವರ ಅಪ್ಪಟ ಅಭಿಮಾನಿಗಳಾಗಿದ್ದಾರೆ. ನಟ ಪುನೀತ್‌ ಅವರ ಅಗಲಿಕೆಯಿಂದ ತೀವ್ರ ದುಖಃವಾಗಿದೆ. ಅವರನ್ನು ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ಕೊನೇ ಪಕ್ಷ ಪಾದಯಾತ್ರೆ ಮೂಲಕ ತೆರಳಿ ಸಮಾ ಯ ದರ್ಶನವನ್ನಾದರೂ ಪಡೆಯಬೇಕೆಂಬ ಉದ್ದೇಶದಿಂದ ಪಾದಯಾತ್ರೆ ಹೊರಟಿದ್ದೇವೆ ಎಂದು ತಿಳಿಸಿದರು.

ಪಾದಯಾತ್ರೆ ಕೈಗೊಳ್ಳುವ ಮುನ್ನ ತಹಶೀಲ್ದಾರ್‌ ಕಚೇರಿ ಬಳಿಯ ವೃತ್ತದಲ್ಲಿನ ಪುನೀತ್‌ ರಾಜಕುಮಾರ್‌ ನಾಮಫಲಕಕ್ಕೆ ಪುಷ್ಪಾರ್ಚನೆ ಮಾಡಿ ತೆರಳಿದರು. ನಗರದ ಪುನೀತ್‌ ಅಭಿಮಾನಿಗಳು ವಿದ್ಯಾರ್ಥಿಗಳನ್ನು ಬೀಳ್ಕೊಟ್ಟರು. ಅಭಿಮಾನಿಗಳಾದ ಕಿಚಿಡಿ ವಿಶ್ವ, ಗುಜ್ಜಲ್‌ ಪರಶುರಾಮ್‌, ಜೋಗಿ ತಾಯಪ್ಪ, ರಮೇಶ್‌, ರಾಘವೇಂದ್ರ, ಶಶಿ, ವೆಂಕಟೇಶ ನಾಯಕ, ಚಂದ್ರಶೇಖರ, ಬಸವ ಮತ್ತಿತರರಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next