Advertisement

Congress ಯಾವುದೇ ಸರ್ಕಾರದಲ್ಲಿ ಬಣಗಳ ಮೇಲಾಟ ಸಹಜ: ಜಗದೀಶ ಶೆಟ್ಟರ್‌

08:09 PM Oct 22, 2023 | Team Udayavani |

ಕಾರಟಗಿ: ಯಾವುದೇ ಸರ್ಕಾರದಲ್ಲಿ ಬಣಗಳ ಮೇಲಾಟ ಸಹಜ. ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದಾಗ ಇದು ಗಮನ ಸೆಳೆಯುತ್ತದೆ. ಆಂತರಿಕವಾಗಿ ಕಾಂಗ್ರೆಸ್‌ ಒಟ್ಟಾಗಿ ಕೆಲಸ ಮಾಡುತ್ತಿದೆ. ಏನೇ ಇದ್ದರೂ ಸಿಎಂ, ಡಿಸಿಎಂ ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್‌ ಹೇಳಿದರು.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ 12ರಿಂದ 15 ಸ್ಥಾನಗಳನ್ನು ಗೆಲ್ಲುವುದು ನಿಶ್ಚಿತ. ಆದರೆ ಮುಂದಿನ ಬೆಳವಣಿಗೆಯ ಲೆಕ್ಕಚಾರ ಹಾಕಿದರೆ 20ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಕಾಂಗ್ರೆಸ್‌ ಜಯ ಗಳಿಸಿದರೂ ಆಶ್ಚರ್ಯಪಡಬೇಕಾಗಿಲ್ಲ. ಬಿಜೆಪಿಯಲ್ಲಿ ನಾಯಕತ್ವದ ಕೊರತೆ ಮುಂದುವರಿದಿದೆ. ಅದು ಹೀಗೆ ಮುಂದುವರಿದರೆ ಕಾಂಗ್ರೆಸ್‌ಗೆ ಲಾಭವಾಗಲಿದೆ. ಬಿಜೆಪಿ ಮುಖಂಡರು ಲೋಕಸಭಾ ಚುನಾವಣೆ ನಂತರ ಸರ್ಕಾರ ಬಿಧ್ದೋಗುತ್ತದೆ ಎನ್ನುವ ಭ್ರಮೆಯಲ್ಲಿದ್ದಾರೆ. ಅವರ ಕನಸು ನನಸಾಗುವುದಿಲ್ಲ. ಜನಾದೇಶ ಇದ್ದ ಸರ್ಕಾರಗಳನ್ನು ಬೀಳಿಸುವುದು ಅವರಿಗೆ ಚಾಳಿಯಾಗಿ ಹೋಗಿದೆ.

ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ತಮ್ಮನ್ನು ಭೇಟಿಯಾಗಿದ್ದಾರೆ. ಅದರಂತೆ ಎಲ್ಲ ಪಕ್ಷದವರು ನನ್ನನ್ನು ಭೇಟಿಯಾಗುತ್ತಾರೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next