Advertisement

ಎಸ್ಸೆಸ್ಸೆಲ್ಸಿ ಮಕ್ಕಳಿಗೆ ತಜ್ಞರ ಸಲಹೆ

05:26 AM Jun 25, 2020 | Lakshmi GovindaRaj |

ಬೆಂಗಳೂರು: ಕೋವಿಡ್‌ 19 ಸಂದಿಗ್ಧ ಪರಿಸ್ಥಿತಿಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು 8.42 ಲಕ್ಷ ವಿದ್ಯಾರ್ಥಿಗಳು ಸಿದ್ಧರಾಗಿದ್ದು, ಪಾಲಕ, ಪೋಷಕ ಮತ್ತು ಪರೀಕ್ಷಾರ್ಥಿಗಳಿಗೆ ತಜ್ಞರು ನೀಡಿರುವ ಕೆಲವು ಸಲಹೆಗಳು ಇಲ್ಲಿವೆ.

Advertisement

* ಮಾಸ್ಕ್ ಧರಿಸುವುದು, ಸ್ಯಾನಿಟೈಜೇಷನ್‌, ಸಾಮಾಜಿಕ ಅಂತರ 8.42 ಲಕ್ಷ ವಿದ್ಯಾರ್ಥಿಗಳಿಗೆ ಅನ್ವಯಿಸಿದ್ದು ಮತ್ತು ಇದರ ಬಗ್ಗೆ ವಿದ್ಯಾರ್ಥಿಗಳು ಭಯ, ಆತಂಕಪಡದೆ, ನಿರ್ಭೀತಿಯಿಂದ ಪರೀಕ್ಷೆ ಬರೆಯಬೇಕು.

* ರ್‍ಯಾಂಕ್‌ ಬದಲು ಚೆನ್ನಾಗಿ ಬರೆದು ಪಾಸಾಗುತ್ತೇನೆ ಎಂಬ ವಿಶ್ವಾಸದಿಂದ ಪರೀಕ್ಷೆ ಎದುರಿಸಿ. ಎಸ್ಸೆಸ್ಸೆಲ್ಸಿ ಪಾಸಾದರೆ ಪಿಯುಸಿ ಸೇರಿ ನಂತರ ಎಂಬಿಬಿಎಸ್‌ ಸೀಟು ಪಡೆಯಲು ಸಾಧ್ಯ. ಪಿಯುಸಿಗೆ ರ್‍ಯಾಂಕ್‌ ಬಗ್ಗೆ ಯೋಚಿಸಿ.

* ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಇಂದಿನ ಪರಿಸ್ಥಿತಿಯ ಅರಿವು ಶಿಕ್ಷಣ ಇಲಾಖೆಗೆ ಚೆನ್ನಾಗಿ ತಿಳಿದಿದೆ ಹೀಗಾಗಿ ಪರೀಕ್ಷೆ ಬರೆಯುವವರಿಗೆ ಇದರ ಚಿಂತೆ ಬೇಡ. * ಪರೀಕ್ಷಾ ಕೇಂದ್ರಕ್ಕೆ ಮಕ್ಕಳನ್ನು ಬಿಟ್ಟು, ಪರೀಕ್ಷಾ ನಂತರ ವಾಪಸ್‌  ಕರೆದುಕೊಂಡು ಬರುವ ಕೆಲಸ ಪಾಲಕರು ಮಾಡಿದರೆ ಸಾಕು.

* ನಿತ್ಯ ಬೆಳಗ್ಗೆ ಮನೆಯಲ್ಲೇ ಚೆನ್ನಾಗಿ ತಿಂಡಿ ತಿಂದು, ಬಾಟಲಿಯಲ್ಲಿ ನೀರು ತುಂಬಿಸಿಕೊಂಡು ಪರೀಕ್ಷಾ ಕೇಂದ್ರಕ್ಕೆ ಹೋಗಿ, ಹೊರಗಡೆ ತಿಂಡಿ ತಿನ್ನದಿರಿ.

Advertisement

*ಪರೀಕ್ಷೆ ಕೊಠಡಿ ಅಥವಾ ಪರೀಕ್ಷೆ ಮುಗಿದು ಮನೆ ಸೇರುವವರೆಗೂ ಬಾಯಿ,  ಮೂಗು ಇತ್ಯಾದಿ ಮುಟ್ಟಿಕೊಳ್ಳದಂತೆ ಎಚ್ಚರವಹಿಸಿ.
-ಡಾ.ಬಿ.ಎನ್‌.ಗಂಗಾಧರ್‌, ನಿರ್ದೇಶಕ ನಿಮ್ಹಾನ್ಸ್‌

***

* ವಿದ್ಯಾರ್ಥಿಗಳು ಅಥವಾ ಪಾಲಕ, ಪೋಷಕರಿಗೆ ಪರೀಕ್ಷಾ ಕೇಂದ್ರದ ಭದ್ರತೆ, ಸುರಕ್ಷತೆಯ ಬಗ್ಗೆ ಚಿಂತೆ ಬೇಡ. ಅದನ್ನು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ, ಆಯಾ ಜಿಲ್ಲಾಡಳಿತ ಮತ್ತು ಪೊಲೀಸ್‌ ಇಲಾಖೆ ಮಾಡುತ್ತದೆ.  ದ್ಯಾರ್ಥಿಗಳು ನಿರಾತಂಕವಾಗಿ  ಪರೀಕ್ಷೆ ಬರೆಯಲು ಎಲ್ಲ ವ್ಯವಸ್ಥೆಯಾಗಿದೆ.

* ಪರೀಕ್ಷಾ ಕೇಂದ್ರದಲ್ಲೇ ಮಾಸ್ಕ್, ಸ್ಯಾನಿಟೈಜೇಷನ್‌ ಮತ್ತು ಸಾಮಾಜಿಕ ಅಂತರದ ಸಂಪೂರ್ಣ ವ್ಯವಸ್ಥೆಯಾಗಿದೆ. ಹೀಗಾಗಿ ಈ ಬಗ್ಗೆ ಯಾವುದೇ ಆತಂಕ ಬೇಡ * ಪರೀಕ್ಷಾ ಕೇಂದ್ರದೊಳಗೆ ನಿಮಗಾಗಿ ವ್ಯವಸ್ಥೆ ಮಾಡಿರುವ ಸ್ಥಳದಲ್ಲಿ  ಬೇರೆ ಯಾವುದೇ ಆಲೋಚನೆಗಳು ಇಲ್ಲದೇ ಪ್ರಶ್ನೆ ಪತ್ರಿಕೆಗಳನ್ನು ಚೆನ್ನಾಗಿ ಓದಿ, ಅರ್ಥಮಾಡಿಕೊಂಡು ಬರೆಯುವುದೇ ನಿಮ್ಮ ಗುರಿಯಾಗಲಿ.

* ಬೇರೆ ಬೇರೆ ಆಲೋಚನೆಗಳನ್ನು ಮಾಡಿ ಓದಿರುವ ಅಂಶಗಳನ್ನು ಮರೆತು ಬಿಡಬೇಡಿ, ಪ್ರಶ್ನೆ ಮತ್ತು ಉತ್ತರದ ಬಗ್ಗೆಯೇ ಗಮನ ಇರಲಿ.
-ವಿ.ಸುಮಂಗಳಾ, ನಿರ್ದೇಶಕಿ, ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ

***

* ಪ್ರತಿ ವಿದ್ಯಾರ್ಥಿಯು ಗೆಲ್ಲುತ್ತೇನೆ ಎಂಬ ಸ್ವಯಂ ನಿರ್ಧಾರ ಮಾಡಬೇಕು. ಶಾಲಾ ಜೀವನದ ಸಕಾರಾತ್ಮಕ ಅಂಶಗಳನ್ನು ನೆನಪಿಗೆ ತಂದುಕೊಳ್ಳಿ, ಪರೀಕ್ಷೆ ಗೆಲ್ಲುತ್ತೇನೆ ಎಂಬ ಧೈರ್ಯ ಮೊದಲು ನಿಮ್ಮಲ್ಲಿ ಹುಟ್ಟಿಸಿಕೊಳ್ಳಿ

* ಇದೇ ಪರೀಕ್ಷೆ  ಅಂತಿಮವಲ್ಲ, ಪೂರಕ ಪರೀಕ್ಷೆಯಿದೆ. ಸಮಚಿತ್ತ ಭಾವದಿಂದ ಪರೀಕ್ಷೆ ಎದುರಿಸುವ ನಿಲುವು ನಿಮ್ಮದಾಗಿರಲಿ.

* ಪರೀಕ್ಷಾ ಕೇಂದ್ರ ಮತ್ತು ಕೊಠಡಿ ಹೇಗಿರಲಿದೆ ಎಂಬುದನ್ನು ನಿಮ್ಮಲ್ಲೇ ಮನನ ಮಾಡಿಕೊಳ್ಳಿ, ಮಾಸ್ಕ್, ಸ್ಯಾನಿಟೈಜರ್‌, ಸಾಮಾಜಿಕ ಅಂತರ ಇತ್ಯಾದಿಗಳ ಬಗ್ಗೆ ನಿಮ್ಮಲ್ಲೇ ಕಲ್ಪನೆ ಇರಲಿ. ಇದ್ಯಾವುದರ ಬಗ್ಗೆಯೂ ಭಯ ಮತ್ತು ಪರೀಕ್ಷಾ  ಕೇಂದ್ರದಲ್ಲಿ ಅತಿಯಾದ ಚಿಂತನೆ ಬೇಡವೇ ಬೇಡ!
-ನಾಗಸಿಂಹ ಜಿ.ರಾವ್‌, ನಿರ್ದೇಶಕ ಚೈಲ್ಡ್‌ ರೈಟ್‌ ಟ್ರಸ್ಟ್‌

Advertisement

Udayavani is now on Telegram. Click here to join our channel and stay updated with the latest news.

Next