Advertisement

Congress ಮಾಜಿ ವಕ್ತಾರೆ ಆರೋಪ; ನನ್ನ ಕೂಡಿಹಾಕಿ, ಮದ್ಯಸೇವಿಸಲು ಪೀಡಿಸಿದ್ದರು!

01:06 AM May 07, 2024 | Team Udayavani |

ಹೊಸದಿಲ್ಲಿ: “ಚುನಾವಣೆ ಕೆಲಸದ ನಿಮಿತ್ತ ಛತ್ತೀಸ್‌ಗಢದಲ್ಲಿದ್ದಾಗ ಅಲ್ಲಿನ ಕಾಂಗ್ರೆಸ್‌ ಸಂವಹನ ಘಟಕದ ಮುಖ್ಯಸ್ಥ ನನ್ನನ್ನು ತೀವ್ರವಾಗಿ ಹಿಂಸಿಸಿದ್ದಾನೆ. ನನ್ನ ಕೊಠಡಿಯ ಬಾಗಿಲು ಬಡಿದು ಮದ್ಯ ಸೇವನೆ ಮಾಡುವಿರಾ? ಎಂದೆಲ್ಲ ಅಸಭ್ಯವಾಗಿ ನಡೆದುಕೊಂಡಿದ್ದಾನೆ. ನನ್ನನ್ನು ಕೊಠಡಿಯಲ್ಲಿ ಕೂಡಿ ಹಾಕಿ ನಿಂದಿಸಿದ್ದಾನೆ’ ಎಂದು ಎಐಸಿಸಿ ಮಾಜಿ ವಕ್ತಾರೆ ರಾಧಿಕಾ ಖೇರಾ ಆರೋಪಿಸಿದ್ದಾರೆ.

Advertisement

ವಕ್ತಾರೆ ಸ್ಥಾನಕ್ಕೆ ರವಿವಾರ ರಾಜೀನಾಮೆ ನೀಡಿದ ರಾಧಿಕಾ ಸೋಮವಾರ ಮಾಧ್ಯಮಗಳ ಮುಂದೆ ಈ ವಿಚಾರ ಬಹಿರಂಗ ಪಡಿಸಿದ್ದಾರೆ. ಖುದ್ದು ಭಾರತ್‌ ಜೋಡೋ ನ್ಯಾಯಯಾತ್ರೆ ಛತ್ತೀಸ್‌ಗಢಕ್ಕೆ ಬಂದಾಗಲೂ ಕಾಂಗ್ರೆಸ್‌ ಸಂವಹನ ವಿಭಾಗದ ಮುಖ್ಯಸ್ಥ ಸುನಿಲ್‌ ಆನಂದ್‌ ನನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದರು. ಈ ಬಗ್ಗೆ ನಾಯಕರಾದ ಬಘೇಲ್‌, ಜೈರಾಂ ರಮೇಶ್‌ರಿಗೆ ಹೇಳಿದರೂ ಯಾರೂ ನನ್ನ ನೆರವಿಗೆ ಬಂದಿಲ್ಲ ಎಂದು ಹೇಳಿದ್ದಾರೆ.

ಪಕ್ಷದಲ್ಲಿ ಮಹಿಳಾ ವಿರೋಧಿ ಧೋರಣೆ ಇದೆ. “ಲಡ್‌ ಕೀ ಹೂಂ ಲಡ್‌ ಸಖ್ತೀ ಹೂಂ'(ನಾನು ಮಹಿಳೆ, ಹೋರಾಡಬಲ್ಲೆ) ಬದಲಿಗೆ “ಲಡ್‌ಕೀ ಹೋ ತೋ ಪೀಟೋಗಿ'(ಹೆಣ್ಣಾಗಿದ್ದರೆ ಹೊಡೆತ ಬೀಳುತ್ತೆ) ಎಂಬುದೇ ಸ್ಲೋಗನ್‌ ಆಗಬೇಕಿತ್ತು ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next