Advertisement

ಭಕ್ತಿ ಪಥದಲ್ಲಿ ಮುನ್ನಡೆದಾಗ ವ್ಯಸನಮುಕ್ತಿ: ಡಾ| ಹೆಗ್ಗಡೆ

02:29 PM May 15, 2024 | Team Udayavani |

ಬೆಳ್ತಂಗಡಿ: ಯಾವುದೇ ಅಭ್ಯಾಸಗಳು ಆಕಸ್ಮಿಕವಾಗಿ, ಅನಾವಶ್ಯಕವಾಗಿ ಪ್ರಾರಂಭವಾಗುತ್ತದೆ. ಬದುಕು ಹಾಳು
ಮಾಡಿಕೊಳ್ಳಬೇಕೆಂಬ ಭಾವನೆಯಿಂದ ಯಾರು ದುಶ್ಚಟಗಳನ್ನು ಮಾಡುವುದಿಲ್ಲ ಬದಲಿಗೆ ಸುಖ, ಸಂತೋಷ, ಧೈರ್ಯ, ಕೆಲಸ ಮುಂತಾದ ವಿಚಾರಗಳನ್ನು ಸಾಧಿಸಬಹುದೆಂಬ ಭ್ರಮೆಯಿಂದ ಚಟಕ್ಕೆ ಬಲಿ ಬೀಳುತ್ತಾರೆ. ಆಧ್ಯಾತ್ಮದ ಒಲವು ಭಕ್ತಿ ಪಥದಲ್ಲಿ ಮುನ್ನಡೆದಾಗ ವ್ಯಸನಗಳು ಬಾಧಿಸುವುದಿಲ್ಲ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರು ಅಭಿಪ್ರಾಯಪಟ್ಟರು.

Advertisement

ಉಜಿರೆ ಲಾೖಲ ಗ್ರಾಮದಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನ ಕೇಂದ್ರದಲ್ಲಿ
ನಡೆಯುತ್ತಿರುವ 223ನೇ ವಿಶೇಷ ಮದ್ಯವರ್ಜನ ಶಿಬಿರದಲ್ಲಿ ಮಾತನಾಡಿದರು. ಧಾರ್ಮಿಕವಾಗಿ ಬದುಕುವವರು ಸ್ವಾಭಾವಿಕವಾಗಿ ಸಾತ್ವಿಕರಾಗುತ್ತಾರೆ. ಆಧ್ಯಾತ್ಮಿಕ ಚಿಂತನೆಗಳಿಂದ ಅತ್ಯುತ್ತಮ ವ್ಯಕ್ತಿತ್ವವನ್ನು ಸಾಧಿಸುತ್ತಾರೆ. ಆದುದರಿಂದ ಭಕ್ತಿ ಪಥದಲ್ಲಿ ಮುನ್ನಡೆದು ದುಶ್ಚಟಗಳನ್ನು ತ್ಯಜಿಸಿ ಸಂಸಾರದೊಂದಿಗೆ ಸಮಾಜದಲ್ಲಿ ನೆಮ್ಮದಿಯಿಂದ ಬಾಳಿ ಬದುಕಬಹುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯ ನಿರ್ವಾಹಕ ನಿರ್ದೇಶಕರಾದ ಡಾ| ಎಲ್‌.
ಎಚ್‌.ಮಂಜುನಾಥ್‌ ಮಾತನಾಡಿ, ಅಹಂಕಾರವೇ ವ್ಯಸನಕ್ಕೆ ಪ್ರಮುಖ ಕಾರಣ. ಈ ವ್ಯಸನವು ಕುಟುಂಬ, ತನ್ನೊಳಗಿನ ವಿಶ್ವಾಸ, ಭರವಸೆ, ಬದುಕಲು ನಿರ್ನಾಮ ಮಾಡುವುದರ ಜತೆಗೆ ನಮ್ಮ ಅಸ್ತಿತ್ವವನ್ನೇ ಇಲ್ಲದಾಗಿಸುತ್ತದೆ. ಇದನ್ನು ಅರ್ಥ ಮಾಡಿಕೊಂಡು ದೇವರಲ್ಲಿ ಅನುಸಂಧಾನ, ಕುಟುಂಬದಲ್ಲಿ ಒಡನಾಟ, ಮಕ್ಕಳಲ್ಲಿ ಪ್ರೀತಿ, ಗುರುಹಿರಿಯರಿಗೆ ಗೌರವ ಹೊಂದುತ್ತಾ
ಬದಲಾಗಬೇಕೆಂದರು.

ಈ ವಿಶೇಷ 8 ದಿನದ ಶಿಬಿರದಲ್ಲಿ ರಾಜ್ಯದ ವಿವಿಧೆಡೆಯಿಂದ 76 ಶಿಬಿರಾರ್ಥಿಗಳು ಭಾಗವಹಿಸಿದರು. ಕೆ.ಎಸ್‌.ಹೆಗ್ಡೆ ಆಸ್ಪತ್ರೆಯ
ಡಾ| ಶ್ರೀನಿವಾಸ್‌ ಭಟ್‌ ನೇತೃತ್ವದಲ್ಲಿ ಮನೋವೈದ್ಯಕೀಯ ಚಿಕಿತ್ಸೆ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ
ಚಿಕಿತ್ಸೆಯ ಮೂಲಕ ಯೋಗ ಮತ್ತು ದೈಹಿಕ ಚಟುವಟಿಕೆಗಳು, ಸಲಹಾ ಕಾರ್ಯಕ್ರಮ, ಸಾಂಸ್ಕೃತಿಕ, ಉಪಯುಕ್ತ ವೀಡಿಯೋ
ಪ್ರದರ್ಶನ, ವಿಷಯಾಧಾರಿತ ಪ್ರವಚನ, ನವಜೀವನ ಸಮಿತಿ ಸದಸ್ಯರ ಅನಿಸಿಕೆ, ಆತ್ಮಾವಲೋಕನ, ಕುಟುಂಬದ ದಿನ ಮುಂತಾದ ಕಾರ್ಯಕ್ರಮಗಳ ಮೂಲಕ ಮನಪರಿವರ್ತನೆಗೆ ಆದ್ಯತೆ ನೀಡಲಾಗಿದೆ.

ಕಾರ್ಯಕ್ರಮದಲ್ಲಿ ಜನಜಾಗೃತಿ ಪ್ರಾದೇಶಿಕ ನಿರ್ದೇಶಕರಾದ ವಿವೇಕ್‌ ವಿ.ಪಾçಸ್‌, ಯೋಜನಾಧಿಕಾರಿ ಮಾಧವಗೌಡ, ಶಿಬಿರಾಧಿಕಾರಿಗಳಾದ ದೇವಿಪ್ರಸಾದ್‌ ಸುವರ್ಣ, ಚಿತ್ತರಂಜನ್‌, ಆರೋಗ್ಯ ಸಹಾಯಕರಾದ ನೇತ್ರಾವತಿ, ರಂಜನಾ ಸಣ್ಣಕ್ಕಿರವರು ಸಹಕರಿಸಿರುತ್ತಾರೆ. ಮುಂದಿನ ವಿಶೇಷ ಶಿಬಿರವು ಮೇ 20ರಂದು ನಡೆಯಲಿದೆ ಎಂದು ವೇದಿಕೆಯ ಪ್ರಕಟನೆ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next