Advertisement

ಮತದಾನಕ್ಕೆ ಪ್ರತಿ ಹಳ್ಳಿಯಲ್ಲೂ ಜಾಗೃತಿ

07:17 AM Mar 08, 2019 | Team Udayavani |

ಹುಣಸೂರು: ಲೋಕಸಭಾ ಚುನಾವಣೆಯಲ್ಲಿ ಎಲ್ಲರೂ ಕಡ್ಡಾಯವಾಗಿ ಮತದಾನ ಪಾಲ್ಗೊಳ್ಳುವಂತೆ ಮತದಾರರಲ್ಲಿ ಜಾಗೃತಿ ಮೂಡಿಸಲು ಚುನಾನಣಾ ಸ್ವೀಪ್‌ ಸಮಿತಿ ಶಾಲಾ-ಕಾಲೇಜು ವಿದ್ಯಾರ್ಥಿಗಳ ಮೂಲಕ ಜಾಗೃತಿ ಜಾಥಾ ನಡೆಸಿತು.

Advertisement

ನಗರದ ರಂಗನಾಥ ಬಡಾವಣೆಯಿಂದ ಹೊರಟ ಜಾಥಾಕ್ಕೆ ಚಾಲನೆ ನೀಡಿದ ಸ್ವೀಪ್‌ ಸಮಿತಿ ಅಧ್ಯಕ್ಷ, ತಾಪಂ ಇಒ ಕೃಷ್ಣಕುಮಾರ್‌ ಮಾತನಾಡಿ, ಪ್ರಜಾಪ್ರಭುತ್ವ ಗಟ್ಟಿಗೊಳ್ಳಲು ಚುನಾವಣೆ ಅತಿ ಮಹತ್ವದ್ದು, ಹೀಗಾಗಿ 18 ವರ್ಷ ತುಂಬಿರುವ ಪ್ರತಿಯೊಬ್ಬರು ಮತದಾನದಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸುವ ಸಲುವಾಗಿ ಜಾಥಾ ನಡೆಸಲಾಗುತ್ತಿದೆ.

ಇನ್ನೂ ಮುಂದೆ ಎಲ್ಲಾ ಹಳ್ಳಿಗಳಲ್ಲೂ ಜಾಥಾ ಸೇರಿದಂತೆ ವಿಭಿನ್ನ ಕಾರ್ಯಕ್ರಮ ರೂಪಿಸುವುದಾಗಿ ತಿಳಿಸಿದರು. ಜಾಥಾದಲ್ಲಿ ಡಿಡಿ ಅರಸು ಕಾಲೇಜಿನ ಎನ್‌ಎಸ್‌ಎಸ್‌ ಹಾಗೂ ಸ್ಕೌಟ್ಸ್‌ ಆ್ಯಂಡ್‌ ಗೈಡ್ಸ್‌ ಮತ್ತು ರಂಗನಾಥ ಬಡಾವಣೆ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಕೈಯಲ್ಲಿ ಮತದಾನ ಪ್ರೇರೇಪಿಸುವ ಫಲಕ ಹಿಡಿದು ಹಾಗೂ ಘೋಷಣೆ ಕೂಗುತ್ತಾ ಸಾಗಿ ಬಂದು ಸಾರ್ವಜನಿಕರ ಗಮನ ಸೆಳೆದರು.

ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ್‌, ಸಿಡಿಪಿಒ ನವೀನ್‌ಕುಮಾರ್‌, ತಾಪಂ ಸಹಾಯಕ ನಿರ್ದೇಶಕ ಪ್ರೇಮಕುಮಾರ್‌, ಅರಸು ಕಾಲೇಜಿನ ಎನ್‌ಎಸ್‌ಎಸ್‌ ಸಂಚಾಲಕ ಕಿರಣ್‌ಕುಮಾರ್‌, ಸ್ಕೌಟ್ಸ್‌ ಆ್ಯಂಡ್‌ ಗೈಡ್ಸ್‌ನ ಸಂಚಾಲಕಿ ಡಾ.ಬಿ.ಎನ್‌.ಕವಿತಾ, ಸಹಪ್ರಾಧ್ಯಾಪಕರಾದ ಬೋಜರಾಜ್‌, ಮಂಜುನಾಥ ಆರ್‌ ಕಟ್ಟಿ, ಪ್ರೌಢಶಾಲಾ ಮುಖ್ಯಶಿಕ್ಷಕ ತಮ್ಮಯ್ಯ, ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಶಶಿಕುಮಾರ್‌ ಹಾಗೂ ಶಿಕ್ಷಕ ವೃಂದ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next